ಕೆರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾಗುವ ಸಲಕರಣೆಗಳನ್ನು ಸಂಗ್ರಹಿಸಿರುವುದು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಹಲಸೂರು ಕೆರೆಯಲ್ಲಿನ ಹೂಳು ತೆಗೆಯುತ್ತಿರುವುದು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಹಲಸೂರು ಕೆರೆಯಲ್ಲಿ ತೇಲುತ್ತಿರುವ ಕುಂಡಗಳು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಹಲಸೂರ ಕೆರೆಯ ಅಭಿವೃದ್ಧಿ ನಂತರದ ಚಿತ್ರಣ
‘ಮಾದರಿ ಕೆರೆ’ ಸಂಕಲ್ಪ
‘ಹಲಸೂರು ಕೆರೆಯನ್ನು ಮಾದರಿ ಕೆರೆಯನ್ನಾಗಿ ರೂಪಿಸಲು ಸಂಕಲ್ಪ ಮಾಡಿದ್ದೇವೆ. ಇಲ್ಲಿರುವ ಉದ್ಯಾನದಲ್ಲಿ ಮಕ್ಕಳಿಗೆ ಆಟವಾಡಲು ಕ್ರೀಡಾ ಪರಿಕರಗಳನ್ನು ಅಳವಡಿಸಲಾಗುವುದು. ಹೊರಾಂಗಣ ಜಿಮ್ಗೆ ಬೇಕಾಗುವ ಸಲಕರಣೆಗಳ ಪೂರೈಕೆ ಮಾಡಲಾಗುತ್ತದೆ. ಚಿಕ್ಕ ಫುಟ್ಬಾಲ್ ಮೈದಾನವನ್ನೂ ಅಭಿವೃದ್ಧಿ ಮಾಡುವುದಿದೆ. ಕೆರೆಯ ದಡದಲ್ಲಿ ಒಂದು ಚಿಕ್ಕ ಗ್ರಂಥಾಲಯವನ್ನು ನಿರ್ಮಿಸುವ ಯೋಜನೆಯನ್ನೂ ರೂಪಿಸಲಾಗಿದೆ. ಸದ್ಯ ₹30 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಇನ್ನೂ ₹30 ಕೋಟಿಯಿಂದ ₹40 ಕೋಟಿ ಅನುದಾನ ಬೇಕಾಗುತ್ತದೆ. ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದು ರಿಜ್ವಾನ್ ಅರ್ಷದ್ ‘ಪ್ರಜಾವಾಣಿ’ಗೆ ತಿಳಿಸಿದರು.