<p class="Briefhead"><strong>ಶಿಕ್ಷಣ ಪರವಾದ ಬಜೆಟ್</strong></p>.<p>ಕೇಂದ್ರದ ಬಜೆಟ್ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಹೊಸ ಸುಧಾರಣೆಗಳಿಗೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಯುವಜನತೆ ಸಬಲರಾಗಲು ಶಿಕ್ಷಣ ಎಂಬ ಅಸ್ತ್ರ ಅಗತ್ಯ. ಪ್ರಸ್ತುತ ಮಂಡನೆಯಾದ ಬಜೆಟ್ನಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುವುದರಲ್ಲಿ ಅನುಮಾನವಿಲ್ಲ.</p>.<p><em><strong>-ಇರ್ಫಾನ್ ಖಾನ್, <span class="Designate">ಕರಾಟೆ ತರಬೇತುದಾರ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p><strong>ತೆರಿಗೆ ವಿನಾಯಿತಿ ಬಜೆಟ್</strong></p>.<p>ಈ ಸಾಲಿನ ಬಜೆಟ್ ಮಧ್ಯಮವರ್ಗದ ಪರವಾಗಿದೆ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಸಾಕಷ್ಟಿವೆ. ಇಂತಹ ಕುಟುಂಬಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಉತ್ತಮ ಚಿಂತನೆ. ಮಧ್ಯಮವರ್ಗದ ಹೊರೆ ಕಡಿಮೆ ಮಾಡಿದೆ.</p>.<p><em><strong>-ಪವಿತ್ರಾ, <span class="Designate">ವಿದ್ಯಾರ್ಥಿನಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>ಪರಿಸರ ಸ್ನೇಹಿ ಸಂಪರ್ಕಕ್ಕೆ ಉತ್ತೇಜನ</strong></p>.<p>ಬಜೆಟ್ನಲ್ಲಿ ಇ–ವಾಹನಗಳ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್ಟಿ) ಕಡಿಮೆ ಮಾಡಿರುವುದು ಒಳ್ಳೆಯ ನಿರ್ಧಾರ. ಮಾಲಿನ್ಯ ನಿಯಂತ್ರಣಕ್ಕೆ ಬಜೆಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ದೇಶದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಆದ್ಯತೆ ನೀಡಿದೆ.</p>.<p><em><strong>-ಕರಣ್, <span class="Designate">ಬ್ಯಾಂಕ್ ಉದ್ಯೋಗಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>‘ಅನ್ನದಾತ’ನಿಗೆ ಶಕ್ತಿ</strong></p>.<p>ರೈತರಿಗಾಗಿ ಶೂನ್ಯ ಬಂಡವಾಳ ಕೃಷಿಗೆ ಬಜೆಟ್ ಸಹಕರಿಸಿದೆ. ಇದರಿಂದ ರೈತರ ಆದಾಯ ದುಪ್ಪಟ್ಟಾಗಲಿದೆ. ರಾಜ್ಯದಲ್ಲಿ ರೈತರ ಸಾಲಮನ್ನಾ ಎಂಬ ಸುಳ್ಳು ಭರವಸೆಗೆ ಸೆಡ್ಡು ಹೊಡೆಯುವಂತೆ ಬಜೆಟ್ ರೈತ ಪರವಾಗಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು ಶ್ಲಾಘನೀಯ.</p>.<p><em><strong>-ಪ್ರೇಮಾ ಎನ್., <span class="Designate">ಉದ್ಯೋಗಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>ತಲೆಬಿಸಿಯಾದ ‘ತೈಲ’</strong></p>.<p>ದೇಶದಲ್ಲಿ ಈಗಾಗಲೇ ತೈಲ ಬೆಲೆಯಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಬಜೆಟ್ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದೆ. ಆದರೆ, ಇಂದಿನ ಬಜೆಟ್ ನನ್ನ ನಿರೀಕ್ಷೆ ಹುಸಿಗೊಳಿಸಿದೆ. ಇದರಿಂದ ಮಧ್ಯಮವರ್ಗಕ್ಕೆ ತೀವ್ರ ಪೆಟ್ಟು ಬೀಳಲಿದೆ.</p>.<p><em><strong>- ಕೆ.ಮುರಳಿ ಕೃಷ್ಣ, <span class="Designate">ವ್ಯಾಪಾರಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>‘ಆರೋಗ್ಯ’ಕರ ಬಜೆಟ್</strong></p>.<p>ಬಜೆಟ್ನಲ್ಲಿ ಆರೋಗ್ಯ ಸಂಬಂಧಿ ಪರಿಕರಗಳು ಅಗ್ಗವಾಗಿದ್ದು, ಮಧ್ಯಮವರ್ಗದವರ ಆರೋಗ್ಯ ಸುಧಾರಣೆಯಾಗಲು ನೆರವಾಗಲಿದೆ. ಇದನ್ನು ಆರೋಗ್ಯಕರ ಬಜೆಟ್ ಎಂದರೆ ತಪ್ಪಾಗಲಾರದು.</p>.<p><em><strong>-ತನುಜಾ ಟಿ.ಜೆ., <span class="Designate">ಛಾಯಾಗ್ರಾಹಕಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>‘ನಾರಿ’ಗೆ ಬಲ</strong></p>.<p>ದೇಶದ ಎಲ್ಲ ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲ ಘೋಷಿಸಿರುವ ನಿರ್ಣಯ ಮೆಚ್ಚುವಂತದ್ದು. ಮುದ್ರಾ ಯೋಜನೆಯಡಿ ಮಹಿಳಾ ಸಂಘಗಳಿಗೆ ₹1 ಲಕ್ಷ ಸಾಲ ಘೋಷಿಸಿವ ಮೂಲಕ ಮಹಿಳೆಯರಿಗೆ ಬಲ ತುಂಬಿದೆ. ಇದರಿಂದ ಮಧ್ಯಮವರ್ಗದ ಕುಟುಂಬಗಳು ಸದೃಢವಾಗಲಿವೆ.</p>.<p><em><strong>-ಎನ್. ರೂಪಾ,<span class="Designate">ಗೃಹಿಣಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>ಚಾಲಕರ ವಿರೋಧಿ ಬಜೆಟ್</strong></p>.<p>ಈ ಬಾರಿಯ ಬಜೆಟ್ ವಾಹನ ಚಾಲಕರ ವಿರೋಧಿ ರೂಪ ತಾಳಿದೆ. ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ ಕೇಂದ್ರದ ನಡೆಗೆ ನನ್ನ ವಿರೋಧವಿದೆ. ಬೆಲೆ ಏರಿಕೆಯಿಂದ ಖಾಸಗಿ ವಾಹನ ಚಾಲಕರು ಪರದಾಡಬೇಕಾಗಿದೆ. ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರ ದುಡುಕಿದೆ.</p>.<p><em><strong>- ಭೈರವ ಸಿದ್ಧರಾಮ, <span class="Designate">ಅಧ್ಯಕ್ಷ, ಕರ್ನಾಟಕ ಪ್ರವಾಸೋದ್ಯಮ ಖಾಸಗಿ ಸಾರಿಗೆ </span></strong></em></p>.<p><em><strong><span class="Designate">ವಾಹನ ಮಾಲೀಕರ ಸಂಘ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ಶಿಕ್ಷಣ ಪರವಾದ ಬಜೆಟ್</strong></p>.<p>ಕೇಂದ್ರದ ಬಜೆಟ್ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಹೊಸ ಸುಧಾರಣೆಗಳಿಗೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಯುವಜನತೆ ಸಬಲರಾಗಲು ಶಿಕ್ಷಣ ಎಂಬ ಅಸ್ತ್ರ ಅಗತ್ಯ. ಪ್ರಸ್ತುತ ಮಂಡನೆಯಾದ ಬಜೆಟ್ನಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುವುದರಲ್ಲಿ ಅನುಮಾನವಿಲ್ಲ.</p>.<p><em><strong>-ಇರ್ಫಾನ್ ಖಾನ್, <span class="Designate">ಕರಾಟೆ ತರಬೇತುದಾರ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p><strong>ತೆರಿಗೆ ವಿನಾಯಿತಿ ಬಜೆಟ್</strong></p>.<p>ಈ ಸಾಲಿನ ಬಜೆಟ್ ಮಧ್ಯಮವರ್ಗದ ಪರವಾಗಿದೆ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಸಾಕಷ್ಟಿವೆ. ಇಂತಹ ಕುಟುಂಬಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಉತ್ತಮ ಚಿಂತನೆ. ಮಧ್ಯಮವರ್ಗದ ಹೊರೆ ಕಡಿಮೆ ಮಾಡಿದೆ.</p>.<p><em><strong>-ಪವಿತ್ರಾ, <span class="Designate">ವಿದ್ಯಾರ್ಥಿನಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>ಪರಿಸರ ಸ್ನೇಹಿ ಸಂಪರ್ಕಕ್ಕೆ ಉತ್ತೇಜನ</strong></p>.<p>ಬಜೆಟ್ನಲ್ಲಿ ಇ–ವಾಹನಗಳ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್ಟಿ) ಕಡಿಮೆ ಮಾಡಿರುವುದು ಒಳ್ಳೆಯ ನಿರ್ಧಾರ. ಮಾಲಿನ್ಯ ನಿಯಂತ್ರಣಕ್ಕೆ ಬಜೆಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ದೇಶದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಆದ್ಯತೆ ನೀಡಿದೆ.</p>.<p><em><strong>-ಕರಣ್, <span class="Designate">ಬ್ಯಾಂಕ್ ಉದ್ಯೋಗಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>‘ಅನ್ನದಾತ’ನಿಗೆ ಶಕ್ತಿ</strong></p>.<p>ರೈತರಿಗಾಗಿ ಶೂನ್ಯ ಬಂಡವಾಳ ಕೃಷಿಗೆ ಬಜೆಟ್ ಸಹಕರಿಸಿದೆ. ಇದರಿಂದ ರೈತರ ಆದಾಯ ದುಪ್ಪಟ್ಟಾಗಲಿದೆ. ರಾಜ್ಯದಲ್ಲಿ ರೈತರ ಸಾಲಮನ್ನಾ ಎಂಬ ಸುಳ್ಳು ಭರವಸೆಗೆ ಸೆಡ್ಡು ಹೊಡೆಯುವಂತೆ ಬಜೆಟ್ ರೈತ ಪರವಾಗಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು ಶ್ಲಾಘನೀಯ.</p>.<p><em><strong>-ಪ್ರೇಮಾ ಎನ್., <span class="Designate">ಉದ್ಯೋಗಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>ತಲೆಬಿಸಿಯಾದ ‘ತೈಲ’</strong></p>.<p>ದೇಶದಲ್ಲಿ ಈಗಾಗಲೇ ತೈಲ ಬೆಲೆಯಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಬಜೆಟ್ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದೆ. ಆದರೆ, ಇಂದಿನ ಬಜೆಟ್ ನನ್ನ ನಿರೀಕ್ಷೆ ಹುಸಿಗೊಳಿಸಿದೆ. ಇದರಿಂದ ಮಧ್ಯಮವರ್ಗಕ್ಕೆ ತೀವ್ರ ಪೆಟ್ಟು ಬೀಳಲಿದೆ.</p>.<p><em><strong>- ಕೆ.ಮುರಳಿ ಕೃಷ್ಣ, <span class="Designate">ವ್ಯಾಪಾರಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>‘ಆರೋಗ್ಯ’ಕರ ಬಜೆಟ್</strong></p>.<p>ಬಜೆಟ್ನಲ್ಲಿ ಆರೋಗ್ಯ ಸಂಬಂಧಿ ಪರಿಕರಗಳು ಅಗ್ಗವಾಗಿದ್ದು, ಮಧ್ಯಮವರ್ಗದವರ ಆರೋಗ್ಯ ಸುಧಾರಣೆಯಾಗಲು ನೆರವಾಗಲಿದೆ. ಇದನ್ನು ಆರೋಗ್ಯಕರ ಬಜೆಟ್ ಎಂದರೆ ತಪ್ಪಾಗಲಾರದು.</p>.<p><em><strong>-ತನುಜಾ ಟಿ.ಜೆ., <span class="Designate">ಛಾಯಾಗ್ರಾಹಕಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>‘ನಾರಿ’ಗೆ ಬಲ</strong></p>.<p>ದೇಶದ ಎಲ್ಲ ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲ ಘೋಷಿಸಿರುವ ನಿರ್ಣಯ ಮೆಚ್ಚುವಂತದ್ದು. ಮುದ್ರಾ ಯೋಜನೆಯಡಿ ಮಹಿಳಾ ಸಂಘಗಳಿಗೆ ₹1 ಲಕ್ಷ ಸಾಲ ಘೋಷಿಸಿವ ಮೂಲಕ ಮಹಿಳೆಯರಿಗೆ ಬಲ ತುಂಬಿದೆ. ಇದರಿಂದ ಮಧ್ಯಮವರ್ಗದ ಕುಟುಂಬಗಳು ಸದೃಢವಾಗಲಿವೆ.</p>.<p><em><strong>-ಎನ್. ರೂಪಾ,<span class="Designate">ಗೃಹಿಣಿ</span></strong></em></p>.<p><em><strong><span class="Designate">------------------------------------------------------------------------------------------------------------------------------------</span></strong></em></p>.<p class="Briefhead"><strong>ಚಾಲಕರ ವಿರೋಧಿ ಬಜೆಟ್</strong></p>.<p>ಈ ಬಾರಿಯ ಬಜೆಟ್ ವಾಹನ ಚಾಲಕರ ವಿರೋಧಿ ರೂಪ ತಾಳಿದೆ. ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ ಕೇಂದ್ರದ ನಡೆಗೆ ನನ್ನ ವಿರೋಧವಿದೆ. ಬೆಲೆ ಏರಿಕೆಯಿಂದ ಖಾಸಗಿ ವಾಹನ ಚಾಲಕರು ಪರದಾಡಬೇಕಾಗಿದೆ. ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರ ದುಡುಕಿದೆ.</p>.<p><em><strong>- ಭೈರವ ಸಿದ್ಧರಾಮ, <span class="Designate">ಅಧ್ಯಕ್ಷ, ಕರ್ನಾಟಕ ಪ್ರವಾಸೋದ್ಯಮ ಖಾಸಗಿ ಸಾರಿಗೆ </span></strong></em></p>.<p><em><strong><span class="Designate">ವಾಹನ ಮಾಲೀಕರ ಸಂಘ</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>