<p><strong>ಬೆಂಗಳೂರು</strong>: ‘ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 500 ಆಸನಗಳ ಸುಸಜ್ಜಿತ ರಂಗಮಂದಿರ ನಿರ್ಮಿಸಿ, ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಬಿ. ಜಯಶ್ರೀ ಅವರು ಸರ್ಕಾರಕ್ಕೆ ಮನವಿ ಮಾಡಿದರು. </p>.<p>ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಉತ್ಸವ ಗೌರವ ಸ್ವೀಕರಿಸಿ, ಮಾತನಾಡಿದರು. </p>.<p>‘ರಾಷ್ಟ್ರೀಯ ರಂಗಭೂಮಿಗೆ ಸಮಾನವಾಗಿ ಕನ್ನಡ ರಂಗಭೂಮಿ ಬೆಳೆದಿದೆ. ಆದ್ದರಿಂದ ಕಲಾಗ್ರಾಮದಲ್ಲಿ ಕೇವಲ 250 ಆಸನಗಳ ಸಭಾಂಗಣವು ರಂಗ ಪ್ರದರ್ಶನಗಳಿಗೆ ಸಾಕಾಗುವುದಿಲ್ಲ. ಇಲ್ಲಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಸುಸಜ್ಜಿತ ರಂಗಮಂದಿರವನ್ನು ಸರ್ಕಾರ ನಿರ್ಮಿಸಬೇಕು’ ಎಂದು ಹೇಳಿದರು. </p>.<p>‘ಭಾರತ ರಂಗ ಮಹೋತ್ಸವದಂತಹ ಉತ್ಸವದಿಂದ ಭಾವೈಕ್ಯ ಸಾಧ್ಯ. ಸರ್ಕಾರ ಇಂತಹ ಉತ್ಸವಗಳನ್ನು ಹೆಚ್ಚು ಆಯೋಜಿಸಬೇಕು. ರಂಗ ಪರಿಷೆಯನ್ನು ಪ್ರತಿ ವರ್ಷ 15 ದಿನಗಳು ನಡೆಸಬೇಕು. ಇಲ್ಲಿನ ರಂಗಭೂಮಿ ವೈವಿಧ್ಯಮಯ ಪ್ರಯೋಗಗಳಿಗೆ ತೆರೆದುಕೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಸುವರ್ಣ ಮಹೋತ್ಸವ ಗೌರವ ಸ್ವೀಕರಿಸಿದ ಕಲಾಗಂಗೋತ್ರಿ ತಂಡದ ಮುಖ್ಯಸ್ಥ ಬಿ.ವಿ. ರಾಜಾರಾಮ್, ‘ನಾಟಕ ಅಕಾಡೆಮಿಯು ರಂಗ ತಂಡಗಳನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸ್ತುತ್ಯರ್ಹ. ಈ ಮೂಲಕ ಇಡೀ ರಂಗಭೂಮಿ ಒಗ್ಗಟ್ಟಾಗಿದೆ ಎಂಬ ಸಂದೇಶ ಸಾರಿದಂತಾಗಿದೆ’ ಎಂದರು.</p>.<p>ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ರಂಗಭೂಮಿಯಲ್ಲಿ 50 ವರ್ಷಗಳು ಪೂರೈಸಿದ ಬೆಂಗಳೂರಿನ ರಂಗ ತಂಡಗಳನ್ನು ಈ ವರ್ಷ ಅಭಿನಂದಿಸಿದ್ದೇವೆ. ಮುಂದಿನ ವರ್ಷದಿಂದ ಈ ಉತ್ಸವದಲ್ಲಿ ಜಿಲ್ಲೆಗಳಲ್ಲಿನ ರಂಗ ತಂಡಗಳನ್ನು ಗೌರವಿಸಲಾಗುವುದು. ಕರ್ನಾಟಕ ಜಾನಪದ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿಯೂ ಈ ಉತ್ಸವಕ್ಕೆ ಸಹಯೋಗ ನೀಡಿದಲ್ಲಿ ಸಾಂಸ್ಕೃತಿಕ ಜಗತ್ತನ್ನೇ ಕಲಾಗ್ರಾಮದಲ್ಲಿ ಅನಾವರಣ ಮಾಡಲು ಸಾಧ್ಯ. ಕಲಾಗ್ರಾಮವು ಸ್ಮಶಾನವಾಗದೆ, ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಬೇಕು’ ಎಂದು ಹೇಳಿದರು. </p>.<p>ಬಳಿಕ ಹೈದರಾಬಾದ್ನ ನಿಭಾ ಥಿಯೇಟರ್ ಎನ್ಸೇಂಬಲ್ ತಂಡ ಪ್ರಸ್ತುತ ಪಡಿಸಿದ ‘ಪಾಕುಡುರಾಲ್ಲು’ ತೆಲುಗು ನಾಟಕ ಪ್ರದರ್ಶನವಾಯಿತು. ಇದನ್ನು ನಾಜರಿನ್ ಇಷಾಕ್ ನಿರ್ದೇಶಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 500 ಆಸನಗಳ ಸುಸಜ್ಜಿತ ರಂಗಮಂದಿರ ನಿರ್ಮಿಸಿ, ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಬಿ. ಜಯಶ್ರೀ ಅವರು ಸರ್ಕಾರಕ್ಕೆ ಮನವಿ ಮಾಡಿದರು. </p>.<p>ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಜಂಟಿಯಾಗಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಉತ್ಸವ ಗೌರವ ಸ್ವೀಕರಿಸಿ, ಮಾತನಾಡಿದರು. </p>.<p>‘ರಾಷ್ಟ್ರೀಯ ರಂಗಭೂಮಿಗೆ ಸಮಾನವಾಗಿ ಕನ್ನಡ ರಂಗಭೂಮಿ ಬೆಳೆದಿದೆ. ಆದ್ದರಿಂದ ಕಲಾಗ್ರಾಮದಲ್ಲಿ ಕೇವಲ 250 ಆಸನಗಳ ಸಭಾಂಗಣವು ರಂಗ ಪ್ರದರ್ಶನಗಳಿಗೆ ಸಾಕಾಗುವುದಿಲ್ಲ. ಇಲ್ಲಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಸುಸಜ್ಜಿತ ರಂಗಮಂದಿರವನ್ನು ಸರ್ಕಾರ ನಿರ್ಮಿಸಬೇಕು’ ಎಂದು ಹೇಳಿದರು. </p>.<p>‘ಭಾರತ ರಂಗ ಮಹೋತ್ಸವದಂತಹ ಉತ್ಸವದಿಂದ ಭಾವೈಕ್ಯ ಸಾಧ್ಯ. ಸರ್ಕಾರ ಇಂತಹ ಉತ್ಸವಗಳನ್ನು ಹೆಚ್ಚು ಆಯೋಜಿಸಬೇಕು. ರಂಗ ಪರಿಷೆಯನ್ನು ಪ್ರತಿ ವರ್ಷ 15 ದಿನಗಳು ನಡೆಸಬೇಕು. ಇಲ್ಲಿನ ರಂಗಭೂಮಿ ವೈವಿಧ್ಯಮಯ ಪ್ರಯೋಗಗಳಿಗೆ ತೆರೆದುಕೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಸುವರ್ಣ ಮಹೋತ್ಸವ ಗೌರವ ಸ್ವೀಕರಿಸಿದ ಕಲಾಗಂಗೋತ್ರಿ ತಂಡದ ಮುಖ್ಯಸ್ಥ ಬಿ.ವಿ. ರಾಜಾರಾಮ್, ‘ನಾಟಕ ಅಕಾಡೆಮಿಯು ರಂಗ ತಂಡಗಳನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸ್ತುತ್ಯರ್ಹ. ಈ ಮೂಲಕ ಇಡೀ ರಂಗಭೂಮಿ ಒಗ್ಗಟ್ಟಾಗಿದೆ ಎಂಬ ಸಂದೇಶ ಸಾರಿದಂತಾಗಿದೆ’ ಎಂದರು.</p>.<p>ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ರಂಗಭೂಮಿಯಲ್ಲಿ 50 ವರ್ಷಗಳು ಪೂರೈಸಿದ ಬೆಂಗಳೂರಿನ ರಂಗ ತಂಡಗಳನ್ನು ಈ ವರ್ಷ ಅಭಿನಂದಿಸಿದ್ದೇವೆ. ಮುಂದಿನ ವರ್ಷದಿಂದ ಈ ಉತ್ಸವದಲ್ಲಿ ಜಿಲ್ಲೆಗಳಲ್ಲಿನ ರಂಗ ತಂಡಗಳನ್ನು ಗೌರವಿಸಲಾಗುವುದು. ಕರ್ನಾಟಕ ಜಾನಪದ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿಯೂ ಈ ಉತ್ಸವಕ್ಕೆ ಸಹಯೋಗ ನೀಡಿದಲ್ಲಿ ಸಾಂಸ್ಕೃತಿಕ ಜಗತ್ತನ್ನೇ ಕಲಾಗ್ರಾಮದಲ್ಲಿ ಅನಾವರಣ ಮಾಡಲು ಸಾಧ್ಯ. ಕಲಾಗ್ರಾಮವು ಸ್ಮಶಾನವಾಗದೆ, ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಬೇಕು’ ಎಂದು ಹೇಳಿದರು. </p>.<p>ಬಳಿಕ ಹೈದರಾಬಾದ್ನ ನಿಭಾ ಥಿಯೇಟರ್ ಎನ್ಸೇಂಬಲ್ ತಂಡ ಪ್ರಸ್ತುತ ಪಡಿಸಿದ ‘ಪಾಕುಡುರಾಲ್ಲು’ ತೆಲುಗು ನಾಟಕ ಪ್ರದರ್ಶನವಾಯಿತು. ಇದನ್ನು ನಾಜರಿನ್ ಇಷಾಕ್ ನಿರ್ದೇಶಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>