<p><strong>ಬೆಂಗಳೂರು: </strong>ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ನೆಲೆಸಿರುವವರು ಗಣೇಶ ಹಬ್ಬಕ್ಕೆ ಊರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಖಾಸಗಿ ಬಸ್ ಕಂಪನಿಯವರು ಈ ಬಾರಿಯೂ ಪ್ರಯಾಣ ದರವನ್ನೂ ಏರಿಕೆ ಮಾಡಿದ್ದಾರೆ.</p>.<p>ಸೆಪ್ಟೆಂಬರ್ 2ರಂದು ಗಣೇಶ ಹಬ್ಬ ಇದೆ. ಅದರ ಮುನ್ನಾದಿನಗಳಾದ ಆ. 31 ಹಾಗೂ ಸೆ. 1ರಂದು ನಗರದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಾರಿಗೆ ನಿಗಮ ಮತ್ತು ಖಾಸಗಿ ಸಂಸ್ಥೆಗಳು ಹೆಚ್ಚುವರಿ ಬಸ್ಗಳ ಸೇವೆ ಒದಗಿಸಿವೆ.</p>.<p>ಬೇಡಿಕೆ ಹೆಚ್ಚಿರುವುದರಿಂದ ಖಾಸಗಿ ಸಂಸ್ಥೆಗಳು, ಪ್ರತಿವರ್ಷದಂತೆ ಈ ವರ್ಷವೂ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿವೆ. ದರ ಹೆಚ್ಚಾದರೂ ಪರವಾಗಿಲ್ಲ. ಊರಿಗೆ ಹೋದರೆ ಸಾಕು ಎನ್ನುತ್ತಿರುವ ಜನ, ಆನ್ಲೈನ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.</p>.<p>ನಗರದಿಂದ ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮುಂಬೈಗೆ ಹೋಗುವ ಖಾಸಗಿ ಬಸ್ಗಳಿಗೆ ಬೇಡಿಕೆ ಇದೆ. ಖಾಸಗಿ ಕಂಪನಿಗಳ ಹವಾನಿಯಂತ್ರಿತ ಸ್ಲೀಪರ್, ನಾನ್ ಎ.ಸಿ ಸ್ಲೀಪರ್, ಎ.ಸಿ ಸೀಟರ್ ಹಾಗೂ ನಾನ್ ಎ.ಸಿ ಸೀಟರ್ ಬಸ್ಗಳ ಪ್ರಯಾಣ ದರ ದುಪ್ಪಟ್ಟು ಮಾಡಲಾಗಿದೆ.</p>.<p>‘ಪ್ರತಿ ವರ್ಷವೂ ಖಾಸಗಿ ಬಸ್ಗಳದ್ದು ಇದೇ ಆಯಿತು. ಸಾರಿಗೆ ಇಲಾಖೆಯೂ ಮೌನವಾಗಿದ್ದು, ನಮ್ಮ ಸಮಸ್ಯೆ ಯಾರಿಗೆ ಹೇಳುವುದು’ ಎಂದು ಪ್ರಯಾಣಿಕ ಭರತ್ ಕುಮಾರ್ ಪ್ರಶ್ನಿಸಿದರು.</p>.<p>ಬಸ್ ಕಂಪನಿ ಮಾಲೀಕರೊಬ್ಬರು, ‘ನಿತ್ಯವೂ ಬಸ್ಗಳ ಸಂಚಾರ ಇದ್ದೇ ಇರುತ್ತದೆ. ಒಮ್ಮೊಮ್ಮೆ ಪ್ರಯಾಣಿಕರ ಕೊರತೆಯಿಂದ ನಷ್ಟವೂ ಉಂಟಾಗುತ್ತದೆ. ಹೀಗಾಗಿ, ಬೇಡಿಕೆ ಇರುವ ಸಮಯದಲ್ಲಿ ದರ ಏರಿಕೆ ಮಾಡುವುದು ಅನಿವಾರ್ಯ’ ಎಂದು ಹೇಳಿದರು.</p>.<p class="Subhead">ರೈಲಿನಲ್ಲೂ ಸೀಟುಗಳು ಭರ್ತಿ : ರೈಲು ಮೂಲಕ ಊರಿಗೆ ಹೋಗುವವರು ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದು, ಬಹುತೇಕ ಸೀಟುಗಳು ಭರ್ತಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ನೆಲೆಸಿರುವವರು ಗಣೇಶ ಹಬ್ಬಕ್ಕೆ ಊರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಖಾಸಗಿ ಬಸ್ ಕಂಪನಿಯವರು ಈ ಬಾರಿಯೂ ಪ್ರಯಾಣ ದರವನ್ನೂ ಏರಿಕೆ ಮಾಡಿದ್ದಾರೆ.</p>.<p>ಸೆಪ್ಟೆಂಬರ್ 2ರಂದು ಗಣೇಶ ಹಬ್ಬ ಇದೆ. ಅದರ ಮುನ್ನಾದಿನಗಳಾದ ಆ. 31 ಹಾಗೂ ಸೆ. 1ರಂದು ನಗರದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಾರಿಗೆ ನಿಗಮ ಮತ್ತು ಖಾಸಗಿ ಸಂಸ್ಥೆಗಳು ಹೆಚ್ಚುವರಿ ಬಸ್ಗಳ ಸೇವೆ ಒದಗಿಸಿವೆ.</p>.<p>ಬೇಡಿಕೆ ಹೆಚ್ಚಿರುವುದರಿಂದ ಖಾಸಗಿ ಸಂಸ್ಥೆಗಳು, ಪ್ರತಿವರ್ಷದಂತೆ ಈ ವರ್ಷವೂ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿವೆ. ದರ ಹೆಚ್ಚಾದರೂ ಪರವಾಗಿಲ್ಲ. ಊರಿಗೆ ಹೋದರೆ ಸಾಕು ಎನ್ನುತ್ತಿರುವ ಜನ, ಆನ್ಲೈನ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುತ್ತಿದ್ದಾರೆ.</p>.<p>ನಗರದಿಂದ ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮುಂಬೈಗೆ ಹೋಗುವ ಖಾಸಗಿ ಬಸ್ಗಳಿಗೆ ಬೇಡಿಕೆ ಇದೆ. ಖಾಸಗಿ ಕಂಪನಿಗಳ ಹವಾನಿಯಂತ್ರಿತ ಸ್ಲೀಪರ್, ನಾನ್ ಎ.ಸಿ ಸ್ಲೀಪರ್, ಎ.ಸಿ ಸೀಟರ್ ಹಾಗೂ ನಾನ್ ಎ.ಸಿ ಸೀಟರ್ ಬಸ್ಗಳ ಪ್ರಯಾಣ ದರ ದುಪ್ಪಟ್ಟು ಮಾಡಲಾಗಿದೆ.</p>.<p>‘ಪ್ರತಿ ವರ್ಷವೂ ಖಾಸಗಿ ಬಸ್ಗಳದ್ದು ಇದೇ ಆಯಿತು. ಸಾರಿಗೆ ಇಲಾಖೆಯೂ ಮೌನವಾಗಿದ್ದು, ನಮ್ಮ ಸಮಸ್ಯೆ ಯಾರಿಗೆ ಹೇಳುವುದು’ ಎಂದು ಪ್ರಯಾಣಿಕ ಭರತ್ ಕುಮಾರ್ ಪ್ರಶ್ನಿಸಿದರು.</p>.<p>ಬಸ್ ಕಂಪನಿ ಮಾಲೀಕರೊಬ್ಬರು, ‘ನಿತ್ಯವೂ ಬಸ್ಗಳ ಸಂಚಾರ ಇದ್ದೇ ಇರುತ್ತದೆ. ಒಮ್ಮೊಮ್ಮೆ ಪ್ರಯಾಣಿಕರ ಕೊರತೆಯಿಂದ ನಷ್ಟವೂ ಉಂಟಾಗುತ್ತದೆ. ಹೀಗಾಗಿ, ಬೇಡಿಕೆ ಇರುವ ಸಮಯದಲ್ಲಿ ದರ ಏರಿಕೆ ಮಾಡುವುದು ಅನಿವಾರ್ಯ’ ಎಂದು ಹೇಳಿದರು.</p>.<p class="Subhead">ರೈಲಿನಲ್ಲೂ ಸೀಟುಗಳು ಭರ್ತಿ : ರೈಲು ಮೂಲಕ ಊರಿಗೆ ಹೋಗುವವರು ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದು, ಬಹುತೇಕ ಸೀಟುಗಳು ಭರ್ತಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>