<p><strong>ಬೆಂಗಳೂರು:</strong>ಮಲ್ಲೇಶ್ವರ–ಶೇಷಾದ್ರಿ ಪುರ ಲಿಂಕ್ ರಸ್ತೆ ಬಳಿಯ ಸೌತ್ ಎಂಡ್ ರೋಡ್ನಲ್ಲಿ ಜಲಮಂಡಳಿಯು ಒಳ ಚರಂಡಿ ಕಾಮಗಾರಿ ಕೈಗೆತ್ತಿ ಕೊಂಡಿದೆ. ನಾಲ್ಕು ತಿಂಗಳಿಂದ ನಡೆಯುತ್ತಿರುವ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಒಳಚರಂಡಿ ಪೈಪ್ಲೈನ್ ಅಳವಡಿಕೆಗಾಗಿ ಕಳೆದ ಮಾರ್ಚ್ನಲ್ಲಿ ರಸ್ತೆಯನ್ನು ಅಗೆದಿದ್ದಾರೆ. ಆದರೆ, ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಎರಡು–ಮೂರು ತಿಂಗಳವರೆಗೆ ಕೆಲಸ ನಡೆಯುವ ಸಾಧ್ಯತೆ ಇದೆ. ಮನೆಯ ಮುಂದೆಯೇ ರಾಶಿ ಮಣ್ಣು ಸುರಿದಿದ್ದು ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ’ ಎಂದು ನಿವಾಸಿ ರಮೇಶ್ ದೂರಿದರು.</p>.<p>‘ಮನೆ ಮುಂದೆಯೇ ಒಳಚರಂಡಿ ಅಳವಡಿಕೆಗೆ ಕಳೆದ ಜನವರಿಯಲ್ಲಿ ಕಾಮಗಾರಿ ನಡೆದಿತ್ತು. ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆಗೆ ಟಾರ್ ಕೂಡ ಹಾಕಲಾಗಿತ್ತು. ಆದರೆ, ಮಾರ್ಚ್ನಲ್ಲಿ ನೀರು ಸರಾಗವಾಗಿ ಹೋಗದೆ ಕಟ್ಟಿಕೊಂಡಿತು. ಏಪ್ರಿಲ್ನಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.</p>.<p>‘ಹನ್ನೊಂದು ಪೈಪ್ಗಳನ್ನು ಗುಂಡಿಯೊಳಗೆ ಹಾಕಲಾಗಿದೆ ಎಂದು ಕೆಲಸಗಾರರು ಹೇಳುತ್ತಾರೆ. ಆದರೆ, ನಾವಂತೂ ನೋಡಿಲ್ಲ. ನಿತ್ಯ ಬಂದು ಮೋಟರ್ ಹಾಕುತ್ತಾರೆ. ನೀರು ತೆಗೆದು ಆಚೆ ಬದಿಯ ಚರಂಡಿಗೆ ಬಿಡುತ್ತಿದ್ದಾರೆ. ಮಣ್ಣು ಅಗೆದು ರಸ್ತೆಯ ಬದಿ ಹಾಕಲಾಗಿದೆ. ಮಳೆ ಬಂದಾಗ ಆ ಮಣ್ಣು ಮತ್ತೆ ಗುಂಡಿಗೆ ಸೇರು ತ್ತಿದೆ’ ಎಂದು ನಿವಾಸಿ ಕುಸುಮಾ ಹೇಳಿದರು.</p>.<p>‘ಹೋಟೆಲ್ ಮುಂದೆಯೇ ಮಣ್ಣು ಹಾಕಿದ್ದಾರೆ. ದೂಳು ಮತ್ತು ವಾಸನೆಯ ಕಾರಣದಿಂದ ಹೆಚ್ಚು ಗ್ರಾಹಕರು ಬರುತ್ತಿಲ್ಲ. ನಮಗೆ ನಷ್ಟವಾಗುತ್ತಿದೆ’ ಎಂದು ಹೋಟೆಲ್ನ ಮಾಲೀಕರು ಅಳಲು ತೋಡಿಕೊಂಡರು.</p>.<p>‘ಮೆಜೆಸ್ಟಿಕ್ಗೆ ಇದೇ ಮಾರ್ಗದಲ್ಲಿ ಹೋಗಬೇಕು. ಐರಾವತ, ವೋಲ್ವೊ ಸೇರಿದಂತೆ ಎಲ್ಲ ಬಸ್ಸುಗಳು, ಬೃಹತ್ ವಾಹನಗಳು ಇದೇ ರಸ್ತೆಯಲ್ಲಿ ಸಾಗು ತ್ತವೆ. ರಸ್ತೆ ಕುಸಿದು ಗುಂಡಿ ಬೀಳುವ ಸಾಧ್ಯತೆ ಇದೆ’ ಎಂದು ನಿವಾಸಿ ಮನು ಆತಂಕ ವ್ಯಕ್ತಪಡಿಸಿದರು.</p>.<p>‘ಮೇಯರ್ ಗಂಗಾಂಬಿಕೆ, ಶಾಸಕ ದಿನೇಶ್ ಗುಂಡೂರಾವ್ ಬಂದು ಕಾಮಗಾರಿ ವೀಕ್ಷಿಸಿ ಹೋಗಿದ್ದಾರೆ. ಆದರೂ, ಬೇಗ ಮುಗಿಸುತ್ತಿಲ್ಲ’ ಎಂದು ಅವರು ಹೇಳಿದರು.</p>.<p>ಕಾಮಗಾರಿ ವಿಳಂಬದ ಕುರಿತು ಮಾಹಿತಿ ಪಡೆಯಲು ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಆದರೆ, ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.</p>.<p>**</p>.<p>ಕಳೆದಶುಕ್ರವಾರ ಮಲ್ಲೇಶ್ವರ ಲಿಂಕ್ ರಸ್ತೆಯಲ್ಲಿ ಆಳೆತ್ತರದ ಗುಂಡಿ ಬಿದ್ದಿತ್ತು. ರಾತ್ರೋರಾತ್ರಿ ಇದನ್ನು ಮಣ್ಣಿನಿಂದ ಮುಚ್ಚಲಾಗಿದೆ. ರಸ್ತೆ ಮತ್ತೆ ಕುಸಿಯುವ ಸಾಧ್ಯತೆ ಇದೆ<br /><em><strong>- ಕುಸುಮಾ, ನಿವಾಸಿ</strong></em></p>.<p>**</p>.<p>ಸುತ್ತು–ಮುತ್ತ ಇರುವವರಿಗೆ ದೂಳಿನ ಅಲರ್ಜಿ ಕಾಡುತ್ತಿದೆ. ಮೋಟರ್ನ ಶಬ್ದದಿಂದ ತಲೆನೋವು ಬರುತ್ತಿದೆ. ಒಂದು ಕಾಮಗಾರಿ ಮುಗಿಸಲು ನಾಲ್ಕು ತಿಂಗಳು ಬೇಕಾ?<br /><em><strong>- ಮನು, ನಿವಾಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಮಲ್ಲೇಶ್ವರ–ಶೇಷಾದ್ರಿ ಪುರ ಲಿಂಕ್ ರಸ್ತೆ ಬಳಿಯ ಸೌತ್ ಎಂಡ್ ರೋಡ್ನಲ್ಲಿ ಜಲಮಂಡಳಿಯು ಒಳ ಚರಂಡಿ ಕಾಮಗಾರಿ ಕೈಗೆತ್ತಿ ಕೊಂಡಿದೆ. ನಾಲ್ಕು ತಿಂಗಳಿಂದ ನಡೆಯುತ್ತಿರುವ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಒಳಚರಂಡಿ ಪೈಪ್ಲೈನ್ ಅಳವಡಿಕೆಗಾಗಿ ಕಳೆದ ಮಾರ್ಚ್ನಲ್ಲಿ ರಸ್ತೆಯನ್ನು ಅಗೆದಿದ್ದಾರೆ. ಆದರೆ, ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಎರಡು–ಮೂರು ತಿಂಗಳವರೆಗೆ ಕೆಲಸ ನಡೆಯುವ ಸಾಧ್ಯತೆ ಇದೆ. ಮನೆಯ ಮುಂದೆಯೇ ರಾಶಿ ಮಣ್ಣು ಸುರಿದಿದ್ದು ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ’ ಎಂದು ನಿವಾಸಿ ರಮೇಶ್ ದೂರಿದರು.</p>.<p>‘ಮನೆ ಮುಂದೆಯೇ ಒಳಚರಂಡಿ ಅಳವಡಿಕೆಗೆ ಕಳೆದ ಜನವರಿಯಲ್ಲಿ ಕಾಮಗಾರಿ ನಡೆದಿತ್ತು. ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆಗೆ ಟಾರ್ ಕೂಡ ಹಾಕಲಾಗಿತ್ತು. ಆದರೆ, ಮಾರ್ಚ್ನಲ್ಲಿ ನೀರು ಸರಾಗವಾಗಿ ಹೋಗದೆ ಕಟ್ಟಿಕೊಂಡಿತು. ಏಪ್ರಿಲ್ನಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.</p>.<p>‘ಹನ್ನೊಂದು ಪೈಪ್ಗಳನ್ನು ಗುಂಡಿಯೊಳಗೆ ಹಾಕಲಾಗಿದೆ ಎಂದು ಕೆಲಸಗಾರರು ಹೇಳುತ್ತಾರೆ. ಆದರೆ, ನಾವಂತೂ ನೋಡಿಲ್ಲ. ನಿತ್ಯ ಬಂದು ಮೋಟರ್ ಹಾಕುತ್ತಾರೆ. ನೀರು ತೆಗೆದು ಆಚೆ ಬದಿಯ ಚರಂಡಿಗೆ ಬಿಡುತ್ತಿದ್ದಾರೆ. ಮಣ್ಣು ಅಗೆದು ರಸ್ತೆಯ ಬದಿ ಹಾಕಲಾಗಿದೆ. ಮಳೆ ಬಂದಾಗ ಆ ಮಣ್ಣು ಮತ್ತೆ ಗುಂಡಿಗೆ ಸೇರು ತ್ತಿದೆ’ ಎಂದು ನಿವಾಸಿ ಕುಸುಮಾ ಹೇಳಿದರು.</p>.<p>‘ಹೋಟೆಲ್ ಮುಂದೆಯೇ ಮಣ್ಣು ಹಾಕಿದ್ದಾರೆ. ದೂಳು ಮತ್ತು ವಾಸನೆಯ ಕಾರಣದಿಂದ ಹೆಚ್ಚು ಗ್ರಾಹಕರು ಬರುತ್ತಿಲ್ಲ. ನಮಗೆ ನಷ್ಟವಾಗುತ್ತಿದೆ’ ಎಂದು ಹೋಟೆಲ್ನ ಮಾಲೀಕರು ಅಳಲು ತೋಡಿಕೊಂಡರು.</p>.<p>‘ಮೆಜೆಸ್ಟಿಕ್ಗೆ ಇದೇ ಮಾರ್ಗದಲ್ಲಿ ಹೋಗಬೇಕು. ಐರಾವತ, ವೋಲ್ವೊ ಸೇರಿದಂತೆ ಎಲ್ಲ ಬಸ್ಸುಗಳು, ಬೃಹತ್ ವಾಹನಗಳು ಇದೇ ರಸ್ತೆಯಲ್ಲಿ ಸಾಗು ತ್ತವೆ. ರಸ್ತೆ ಕುಸಿದು ಗುಂಡಿ ಬೀಳುವ ಸಾಧ್ಯತೆ ಇದೆ’ ಎಂದು ನಿವಾಸಿ ಮನು ಆತಂಕ ವ್ಯಕ್ತಪಡಿಸಿದರು.</p>.<p>‘ಮೇಯರ್ ಗಂಗಾಂಬಿಕೆ, ಶಾಸಕ ದಿನೇಶ್ ಗುಂಡೂರಾವ್ ಬಂದು ಕಾಮಗಾರಿ ವೀಕ್ಷಿಸಿ ಹೋಗಿದ್ದಾರೆ. ಆದರೂ, ಬೇಗ ಮುಗಿಸುತ್ತಿಲ್ಲ’ ಎಂದು ಅವರು ಹೇಳಿದರು.</p>.<p>ಕಾಮಗಾರಿ ವಿಳಂಬದ ಕುರಿತು ಮಾಹಿತಿ ಪಡೆಯಲು ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಆದರೆ, ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.</p>.<p>**</p>.<p>ಕಳೆದಶುಕ್ರವಾರ ಮಲ್ಲೇಶ್ವರ ಲಿಂಕ್ ರಸ್ತೆಯಲ್ಲಿ ಆಳೆತ್ತರದ ಗುಂಡಿ ಬಿದ್ದಿತ್ತು. ರಾತ್ರೋರಾತ್ರಿ ಇದನ್ನು ಮಣ್ಣಿನಿಂದ ಮುಚ್ಚಲಾಗಿದೆ. ರಸ್ತೆ ಮತ್ತೆ ಕುಸಿಯುವ ಸಾಧ್ಯತೆ ಇದೆ<br /><em><strong>- ಕುಸುಮಾ, ನಿವಾಸಿ</strong></em></p>.<p>**</p>.<p>ಸುತ್ತು–ಮುತ್ತ ಇರುವವರಿಗೆ ದೂಳಿನ ಅಲರ್ಜಿ ಕಾಡುತ್ತಿದೆ. ಮೋಟರ್ನ ಶಬ್ದದಿಂದ ತಲೆನೋವು ಬರುತ್ತಿದೆ. ಒಂದು ಕಾಮಗಾರಿ ಮುಗಿಸಲು ನಾಲ್ಕು ತಿಂಗಳು ಬೇಕಾ?<br /><em><strong>- ಮನು, ನಿವಾಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>