<p><strong>ಬೆಂಗಳೂರು:</strong> ಬಿಬಿಎಂಪಿಯ ಬೆನ್ನಿಗಾನಹಳ್ಳಿ ವಾರ್ಡ್ (50) ವ್ಯಾಪ್ತಿಯಲ್ಲಿರುವ ಸದಾನಂದನಗರದ ನಿವಾಸಿಗಳು ಸುಮಾರು 6 ತಿಂಗಳಿನಿಂದ ಕೊಳಚೆ ನೀರಿನ ದುರ್ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ. ಈ ಬಗ್ಗೆ ಜಲಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.</p>.<p>‘ಆರು ತಿಂಗಳ ಹಿಂದೆ, ಒಳಚರಂಡಿಯ ಹಳೆಯ ಪೈಪ್ಗಳನ್ನು ತೆಗೆದು, ಹೊಸ ಪೈಪ್ಗಳನ್ನು ಹಾಕುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಳಚರಂಡಿಗಳಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡಿದೆ. ಆರು ತಿಂಗಳಿನಿಂದ ದುರ್ವಾಸನೆ ಸಹಿಸಿಕೊಂಡೇ ಇರಬೇಕಾಗಿದೆ’ ಎಂದು ಸದಾನಂದನಗರ ನಿವಾಸಿ ಕೆ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಿಧಾನವಾಗಿಯಾದರೂ ನಡೆಯುತ್ತಿದ್ದ ಕಾಮಗಾರಿ ಈಗ 20 ದಿನಗಳಿಂದ ಸಂಪೂರ್ಣ ಸ್ಥಗಿತವಾಗಿ ಬಿಟ್ಟಿದೆ. ಮನೆ ಮುಂದೆಯೇ ಕಲುಷಿತನೀರು ನಿಂತಿದ್ದು ತುಂಬಾ ಸಮಸ್ಯೆಯಾಗುತ್ತಿದೆ. ಸೊಳ್ಳೆ, ನುಸಿಗಳು ಹೆಚ್ಚುತ್ತಿವೆ’ ಎಂದು ಅವರು ಅಳಲು ತೋಡಿಕೊಂಡರು.</p>.<p>‘ಮಳೆ ನೀರು ಕಾಲುವೆ ಜೊತೆಗೆ, ಒಳಚರಂಡಿ ನೀರು ಕೂಡ ಸೇರಿಕೊಳ್ಳುತ್ತಿದೆ. ಬಿಬಿಎಂಪಿ ಆಗಲಿ, ಜಲಮಂಡಳಿ ಆಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸಮಸ್ಯೆಗಳೆಲ್ಲ ಗಮನಕ್ಕೆ ಬರುವುದೇ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p class="Subhead"><strong>ರೈಲ್ವೆ ಹಳಿ ಬಳಿ ಸ್ಥಗಿತ</strong></p>.<p>ಕೃಷ್ಣಯ್ಯನ ಪಾಳ್ಯ ಬದಿಯಿಂದ ಒಂದೆಡೆ, ಹಳೆಯ ಮದ್ರಾಸ್ ರಸ್ತೆ ಬದಿಯಿಂದ ಇನ್ನೊಂದೆಡೆ ಕಾಮಗಾರಿ ಮುಂದುವರಿದುಕೊಂಡು ಬಂದಿದೆ. ಆದರೆ, ಸದಾನಂದನಗರ ಬಳಿ ಸ್ಥಗಿತಗೊಂಡಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಹಳಿಯ ಮಾರ್ಗವಾಗಿ ಈ ದೊಡ್ಡ ಪೈಪ್ಗಳನ್ನು ಅಳವಡಿಸಬೇಕಾಗಿದೆ.</p>.<p>‘ಜಲಮಂಡಳಿಯು ಯಾವುದೇ ಪೂರ್ವಯೋಜನೆ ಇಲ್ಲದೆ ಈ ಕಾಮಗಾರಿ ಕೈಗೆತ್ತಿಕೊಂಡಂತಿದೆ. ಒಂದು ಕಡೆಯಿಂದ ಕೆಲಸ ಪ್ರಾರಂಭಿಸಿ ಹಂತ–ಹಂತವಾಗಿ ಮುಗಿಸಬೇಕಿತ್ತು. ಈಗ ಎಲ್ಲ ಕಡೆ ಪೈಪ್ಗಳನ್ನು ಹಾಕಿ, ಅದಕ್ಕೆ ಒಳಚರಂಡಿ ಸಂಪರ್ಕ ನೀಡದೇ ಹಾಗೆಯೇ ಬಿಟ್ಟಿದ್ದಾರೆ. ಮಳೆ ಬಂದಾಗ ಆ ನೀರಿನ ಜೊತೆಗೆ, ಕೊಳಚೆ ನೀರು ಕೂಡ ಸೇರಿ ರಸ್ತೆಯ ಮೇಲೆ ಹರಿಯುತ್ತದೆ’ ಎಂದು ನಿವಾಸಿಗಳು ದೂರುತ್ತಾರೆ.bw</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿಯ ಬೆನ್ನಿಗಾನಹಳ್ಳಿ ವಾರ್ಡ್ (50) ವ್ಯಾಪ್ತಿಯಲ್ಲಿರುವ ಸದಾನಂದನಗರದ ನಿವಾಸಿಗಳು ಸುಮಾರು 6 ತಿಂಗಳಿನಿಂದ ಕೊಳಚೆ ನೀರಿನ ದುರ್ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ. ಈ ಬಗ್ಗೆ ಜಲಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.</p>.<p>‘ಆರು ತಿಂಗಳ ಹಿಂದೆ, ಒಳಚರಂಡಿಯ ಹಳೆಯ ಪೈಪ್ಗಳನ್ನು ತೆಗೆದು, ಹೊಸ ಪೈಪ್ಗಳನ್ನು ಹಾಕುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಳಚರಂಡಿಗಳಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡಿದೆ. ಆರು ತಿಂಗಳಿನಿಂದ ದುರ್ವಾಸನೆ ಸಹಿಸಿಕೊಂಡೇ ಇರಬೇಕಾಗಿದೆ’ ಎಂದು ಸದಾನಂದನಗರ ನಿವಾಸಿ ಕೆ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಿಧಾನವಾಗಿಯಾದರೂ ನಡೆಯುತ್ತಿದ್ದ ಕಾಮಗಾರಿ ಈಗ 20 ದಿನಗಳಿಂದ ಸಂಪೂರ್ಣ ಸ್ಥಗಿತವಾಗಿ ಬಿಟ್ಟಿದೆ. ಮನೆ ಮುಂದೆಯೇ ಕಲುಷಿತನೀರು ನಿಂತಿದ್ದು ತುಂಬಾ ಸಮಸ್ಯೆಯಾಗುತ್ತಿದೆ. ಸೊಳ್ಳೆ, ನುಸಿಗಳು ಹೆಚ್ಚುತ್ತಿವೆ’ ಎಂದು ಅವರು ಅಳಲು ತೋಡಿಕೊಂಡರು.</p>.<p>‘ಮಳೆ ನೀರು ಕಾಲುವೆ ಜೊತೆಗೆ, ಒಳಚರಂಡಿ ನೀರು ಕೂಡ ಸೇರಿಕೊಳ್ಳುತ್ತಿದೆ. ಬಿಬಿಎಂಪಿ ಆಗಲಿ, ಜಲಮಂಡಳಿ ಆಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸಮಸ್ಯೆಗಳೆಲ್ಲ ಗಮನಕ್ಕೆ ಬರುವುದೇ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.</p>.<p class="Subhead"><strong>ರೈಲ್ವೆ ಹಳಿ ಬಳಿ ಸ್ಥಗಿತ</strong></p>.<p>ಕೃಷ್ಣಯ್ಯನ ಪಾಳ್ಯ ಬದಿಯಿಂದ ಒಂದೆಡೆ, ಹಳೆಯ ಮದ್ರಾಸ್ ರಸ್ತೆ ಬದಿಯಿಂದ ಇನ್ನೊಂದೆಡೆ ಕಾಮಗಾರಿ ಮುಂದುವರಿದುಕೊಂಡು ಬಂದಿದೆ. ಆದರೆ, ಸದಾನಂದನಗರ ಬಳಿ ಸ್ಥಗಿತಗೊಂಡಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಹಳಿಯ ಮಾರ್ಗವಾಗಿ ಈ ದೊಡ್ಡ ಪೈಪ್ಗಳನ್ನು ಅಳವಡಿಸಬೇಕಾಗಿದೆ.</p>.<p>‘ಜಲಮಂಡಳಿಯು ಯಾವುದೇ ಪೂರ್ವಯೋಜನೆ ಇಲ್ಲದೆ ಈ ಕಾಮಗಾರಿ ಕೈಗೆತ್ತಿಕೊಂಡಂತಿದೆ. ಒಂದು ಕಡೆಯಿಂದ ಕೆಲಸ ಪ್ರಾರಂಭಿಸಿ ಹಂತ–ಹಂತವಾಗಿ ಮುಗಿಸಬೇಕಿತ್ತು. ಈಗ ಎಲ್ಲ ಕಡೆ ಪೈಪ್ಗಳನ್ನು ಹಾಕಿ, ಅದಕ್ಕೆ ಒಳಚರಂಡಿ ಸಂಪರ್ಕ ನೀಡದೇ ಹಾಗೆಯೇ ಬಿಟ್ಟಿದ್ದಾರೆ. ಮಳೆ ಬಂದಾಗ ಆ ನೀರಿನ ಜೊತೆಗೆ, ಕೊಳಚೆ ನೀರು ಕೂಡ ಸೇರಿ ರಸ್ತೆಯ ಮೇಲೆ ಹರಿಯುತ್ತದೆ’ ಎಂದು ನಿವಾಸಿಗಳು ದೂರುತ್ತಾರೆ.bw</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>