‘ಆರು ತಿಂಗಳ ಹಿಂದೆ, ಒಳಚರಂಡಿಯ ಹಳೆಯ ಪೈಪ್ಗಳನ್ನು ತೆಗೆದು, ಹೊಸ ಪೈಪ್ಗಳನ್ನು ಹಾಕುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಳಚರಂಡಿಗಳಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡಿದೆ. ಆರು ತಿಂಗಳಿನಿಂದ ದುರ್ವಾಸನೆ ಸಹಿಸಿಕೊಂಡೇ ಇರಬೇಕಾಗಿದೆ’ ಎಂದು ಸದಾನಂದನಗರ ನಿವಾಸಿ ಕೆ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.