<p><strong>ಬೊಮ್ಮನಹಳ್ಳಿ:</strong> ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ವಿಗ್ ತಯಾರಿಸಿ ಉಚಿತವಾಗಿ ನೀಡುವ ಕೆಲಸವನ್ನು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಇಂಥ ಪ್ರಯತ್ನ ಬನ್ನೇರುಘಟ್ಟ ರಸ್ತೆಯ ಟಿ. ಜಾನ್ ಕಾಲೇಜಿನಲ್ಲಿ ನಡೆದಿದೆ.</p>.<p>ಕಾಲೇಜಿನ ಎನ್ಎಸ್ಎಸ್ ಘಟಕವು ‘ಗ್ರೀನ್ ಟ್ರೆಂಡ್’ ಸಂಸ್ಥೆ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಕ್ಯಾನ್ಸರ್ ಪೀಡಿತರಿಗೆ ಕೂದಲು ನೀಡಿ’ ಎಂಬ ಮೂರು ದಿನಗಳ ಅಭಿಯಾನ ಏರ್ಪಡಿಸಿದ್ದು, ಅಧ್ಯಾಪಕರೂ ಸೇರಿ 300 ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದ್ದಾರೆ.</p>.<p>ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರೇರಣಾ, ‘ಹೀಗೂ ಸೇವೆ ಮಾಡಬಹುದು ಎಂದು ತಿಳಿಯಿತು. ಕೂದಲು ನೀಡಿದ್ದು ಖುಷಿಯಾಗಿದೆ’ ಎಂದರು.</p>.<p>ಬಿಬಿಎ ವಿದ್ಯಾರ್ಥಿನಿ ನಿಶಾ, ‘ ಕ್ಯಾನ್ಸರ್ನಿಂದ ಕೂದಲು ಇರುವುದಿಲ್ಲ ಎಂದು ಕಲ್ಪಿಸಿಕೊಳ್ಳಲೂ ಆಗದು. ಅದಕ್ಕಾಗಿಯೇ ನಾನು ದಾನ ಮಾಡಿದೆ’ ಎಂದರು.</p>.<p>ಗ್ರೀನ್ ಟ್ರೆಂಡ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ರಾಜೀವ್ ಪಾಟೀಲ, ‘ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಂಗ್ರಹವಾದ ಕೂದಲಿನಿಂದ ವಿಗ್ ತಯಾರಿಸಿ ಬಡರೋಗಿಗಳಿಗೆ ಉಚಿತವಾಗಿ ನೀಡುತ್ತೇವೆ’ ಎಂದರು. ಎನ್ಎಸ್ಎಸ್ ಘಟಕದ ನಿರ್ವಾಹಕಿ ಆರ್.ವೈಷ್ಣವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೊಮ್ಮನಹಳ್ಳಿ:</strong> ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ವಿಗ್ ತಯಾರಿಸಿ ಉಚಿತವಾಗಿ ನೀಡುವ ಕೆಲಸವನ್ನು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಇಂಥ ಪ್ರಯತ್ನ ಬನ್ನೇರುಘಟ್ಟ ರಸ್ತೆಯ ಟಿ. ಜಾನ್ ಕಾಲೇಜಿನಲ್ಲಿ ನಡೆದಿದೆ.</p>.<p>ಕಾಲೇಜಿನ ಎನ್ಎಸ್ಎಸ್ ಘಟಕವು ‘ಗ್ರೀನ್ ಟ್ರೆಂಡ್’ ಸಂಸ್ಥೆ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಕ್ಯಾನ್ಸರ್ ಪೀಡಿತರಿಗೆ ಕೂದಲು ನೀಡಿ’ ಎಂಬ ಮೂರು ದಿನಗಳ ಅಭಿಯಾನ ಏರ್ಪಡಿಸಿದ್ದು, ಅಧ್ಯಾಪಕರೂ ಸೇರಿ 300 ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದ್ದಾರೆ.</p>.<p>ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರೇರಣಾ, ‘ಹೀಗೂ ಸೇವೆ ಮಾಡಬಹುದು ಎಂದು ತಿಳಿಯಿತು. ಕೂದಲು ನೀಡಿದ್ದು ಖುಷಿಯಾಗಿದೆ’ ಎಂದರು.</p>.<p>ಬಿಬಿಎ ವಿದ್ಯಾರ್ಥಿನಿ ನಿಶಾ, ‘ ಕ್ಯಾನ್ಸರ್ನಿಂದ ಕೂದಲು ಇರುವುದಿಲ್ಲ ಎಂದು ಕಲ್ಪಿಸಿಕೊಳ್ಳಲೂ ಆಗದು. ಅದಕ್ಕಾಗಿಯೇ ನಾನು ದಾನ ಮಾಡಿದೆ’ ಎಂದರು.</p>.<p>ಗ್ರೀನ್ ಟ್ರೆಂಡ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ರಾಜೀವ್ ಪಾಟೀಲ, ‘ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಂಗ್ರಹವಾದ ಕೂದಲಿನಿಂದ ವಿಗ್ ತಯಾರಿಸಿ ಬಡರೋಗಿಗಳಿಗೆ ಉಚಿತವಾಗಿ ನೀಡುತ್ತೇವೆ’ ಎಂದರು. ಎನ್ಎಸ್ಎಸ್ ಘಟಕದ ನಿರ್ವಾಹಕಿ ಆರ್.ವೈಷ್ಣವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>