<p><strong>ಬೆಂಗಳೂರು:</strong> ಬನಶಂಕರಿ ಎರಡನೇ ಹಂತದಲ್ಲಿರುವ ಸೇವಾ ಕ್ಷೇತ್ರ ಆಸ್ಪತ್ರೆಯ ಮಾತೃಛಾಯಾ ಆವರಣದಲ್ಲಿ ಆಯೋಜಿಸಿರುವ ಕೆನರಾ ಉತ್ಸವವನ್ನು ಕೆನರಾ ಬ್ಯಾಂಕ್ನ ಮುಖ್ಯ ಮಹಾಪ್ರಬಂಧಕ ಬಿ. ಶಂಭುಲಾಲ್ ಮಂಗಳವಾರ ಉದ್ಘಾಟಿಸಿದರು. </p>.<p>ಕೆನರಾ ಬ್ಯಾಂಕ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಕೆನರಾ ಬ್ಯಾಂಕ್ನ ಪರಿಹಾರ ಮತ್ತು ಕಲ್ಯಾಣ ಸೊಸೈಟಿಯ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಿದ್ದು, ಇದೇ 22ರವರೆಗೆ ನಡೆಯಲಿದೆ. </p>.<p>ಸೊಸೈಟಿಯ ಅಧ್ಯಕ್ಷ ಪ್ರಕಾಶ್ ಮಲ್ಯ ಮಾತನಾಡಿ, ‘ಈ ಉತ್ಸವವನ್ನು 12 ವರ್ಷಗಳಿಂದ ಆಯೋಜಿಸುತ್ತಿದ್ದು, ಮಹಿಳಾ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ’ ಎಂದರು.</p>.<p>ಇದೇ ಸಂದರ್ಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾದ ಕಮಲಮ್ಮ, ವಿನುತಾ ಹಾಗೂ ಡೊರೆಟ್ಟೆ ಕ್ರಿಸ್ಟೆಬಲ್ ಅವರನ್ನು ಸನ್ಮಾನಿಸಲಾಯಿತು.</p>.<p>ಕೆನರಾ ಬ್ಯಾಂಕ್ನ ಉಪಮುಖ್ಯ ಪ್ರಬಂಧಕ ದಲ್ಬೀರ್ ಸಿಂಗ್ ಗ್ರೋವರ್, ಡಿ.ಎಸ್. ಆನಂದಮೂರ್ತಿ, ಕೆ.ಎಸ್.ಎಸ್. ಕಾಮತ್, ಪ್ರೇಮಾ ರತ್ನಾಕರ್, ಶ್ರೀಧರ್ ಸಗಾಬಲ, ಎಸ್.ಟಿ. ರಾಮಚಂದ್ರ, ಶಂಕರ್ ಗೌರಯ್ಯ, ರಾಜಶ್ರೀ ಸತೀಶ್, ಶೀಲಾ ಕಾಮತ್, ಬ್ರಿಜುಷಾ ಬಾಲ್, ಸುಮಂಗಲ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬನಶಂಕರಿ ಎರಡನೇ ಹಂತದಲ್ಲಿರುವ ಸೇವಾ ಕ್ಷೇತ್ರ ಆಸ್ಪತ್ರೆಯ ಮಾತೃಛಾಯಾ ಆವರಣದಲ್ಲಿ ಆಯೋಜಿಸಿರುವ ಕೆನರಾ ಉತ್ಸವವನ್ನು ಕೆನರಾ ಬ್ಯಾಂಕ್ನ ಮುಖ್ಯ ಮಹಾಪ್ರಬಂಧಕ ಬಿ. ಶಂಭುಲಾಲ್ ಮಂಗಳವಾರ ಉದ್ಘಾಟಿಸಿದರು. </p>.<p>ಕೆನರಾ ಬ್ಯಾಂಕ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಕೆನರಾ ಬ್ಯಾಂಕ್ನ ಪರಿಹಾರ ಮತ್ತು ಕಲ್ಯಾಣ ಸೊಸೈಟಿಯ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಿದ್ದು, ಇದೇ 22ರವರೆಗೆ ನಡೆಯಲಿದೆ. </p>.<p>ಸೊಸೈಟಿಯ ಅಧ್ಯಕ್ಷ ಪ್ರಕಾಶ್ ಮಲ್ಯ ಮಾತನಾಡಿ, ‘ಈ ಉತ್ಸವವನ್ನು 12 ವರ್ಷಗಳಿಂದ ಆಯೋಜಿಸುತ್ತಿದ್ದು, ಮಹಿಳಾ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ’ ಎಂದರು.</p>.<p>ಇದೇ ಸಂದರ್ಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾದ ಕಮಲಮ್ಮ, ವಿನುತಾ ಹಾಗೂ ಡೊರೆಟ್ಟೆ ಕ್ರಿಸ್ಟೆಬಲ್ ಅವರನ್ನು ಸನ್ಮಾನಿಸಲಾಯಿತು.</p>.<p>ಕೆನರಾ ಬ್ಯಾಂಕ್ನ ಉಪಮುಖ್ಯ ಪ್ರಬಂಧಕ ದಲ್ಬೀರ್ ಸಿಂಗ್ ಗ್ರೋವರ್, ಡಿ.ಎಸ್. ಆನಂದಮೂರ್ತಿ, ಕೆ.ಎಸ್.ಎಸ್. ಕಾಮತ್, ಪ್ರೇಮಾ ರತ್ನಾಕರ್, ಶ್ರೀಧರ್ ಸಗಾಬಲ, ಎಸ್.ಟಿ. ರಾಮಚಂದ್ರ, ಶಂಕರ್ ಗೌರಯ್ಯ, ರಾಜಶ್ರೀ ಸತೀಶ್, ಶೀಲಾ ಕಾಮತ್, ಬ್ರಿಜುಷಾ ಬಾಲ್, ಸುಮಂಗಲ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>