<p><strong>ಬೆಂಗಳೂರು: </strong>ನಗರದ ಟ್ರಿನಿಟಿ ವೃತ್ತದಲ್ಲಿ ಶುಕ್ರವಾರ ಸಂಜೆ ಕಾರು ಚಾಲಕರಿಬ್ಬರು ನಡುರಸ್ತೆಯಲ್ಲೇ ಗಲಾಟೆ ಮಾಡಿದ್ದರಿಂದ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ದಟ್ಟಣೆ ಉಂಟಾಯಿತು.</p>.<p>ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಹೊರಟಿದ್ದ ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಅಷ್ಟಕ್ಕೆ ಕಾರಿನಿಂದ ಇಳಿದಿದ್ದ ಚಾಲಕರಿಬ್ಬರು, ಪರಸ್ಪರ ಬೈದುಕೊಳ್ಳಲಾರಂಭಿಸಿದ್ದರು.</p>.<p>ಹತ್ತು ನಿಮಿಷ ನಡೆದ ಅವರಿಬ್ಬರ ಗಲಾಟೆಯಿಂದ ಎರಡೂ ಕಾರುಗಳು ರಸ್ತೆಯಲ್ಲೇ ಇದ್ದವು. ಅವುಗಳ ಹಿಂದೆಯೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಂದಕ್ಕೆ ಹೋಗಲು ಸಹ ಜಾಗವಿರಲಿಲ್ಲ. ಟ್ರಿನಿಟಿ ವೃತ್ತದಿಂದ ಹಲಸೂರು ಸಿಗ್ನಲ್ವರೆಗೂ ಸಂಚಾರ ದಟ್ಟಣೆ ಉಂಟಾಯಿತು.</p>.<p>ಮೆಟ್ರೊ ಕಾಮಗಾರಿ ನಿಮಿತ್ತ ಕಾಮರಾಜ ರಸ್ತೆ ಬಂದ್ ಆಗಿದ್ದು, ಪರ್ಯಾಯ ಮಾರ್ಗದ ಮೂಲಕ ಬಂದಿದ್ದ ಚಾಲಕರು ದಟ್ಟಣೆಯಿಂದ ಸಿಲುಕಿ ಪರದಾಡುವಂತಾಯಿತು. ಕೆಲವರು ಕಾರಿನಿಂದ ಇಳಿದು, ಗಲಾಟೆ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು.</p>.<p>ಅಷ್ಟರಲ್ಲೇ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ‘ಟೈಗರ್’ ವಾಹನದ ಮೂಲಕ ಎರಡೂ ಕಾರುಗಳನ್ನು ಟೋಯಿಂಗ್ ಮಾಡಿಕೊಂಡು ಹೋದರು. ನಂತರವೇ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಟ್ರಿನಿಟಿ ವೃತ್ತದಲ್ಲಿ ಶುಕ್ರವಾರ ಸಂಜೆ ಕಾರು ಚಾಲಕರಿಬ್ಬರು ನಡುರಸ್ತೆಯಲ್ಲೇ ಗಲಾಟೆ ಮಾಡಿದ್ದರಿಂದ, ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ದಟ್ಟಣೆ ಉಂಟಾಯಿತು.</p>.<p>ಎಂ.ಜಿ.ರಸ್ತೆಯಿಂದ ಹಲಸೂರು ಕಡೆಗೆ ಹೊರಟಿದ್ದ ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಅಷ್ಟಕ್ಕೆ ಕಾರಿನಿಂದ ಇಳಿದಿದ್ದ ಚಾಲಕರಿಬ್ಬರು, ಪರಸ್ಪರ ಬೈದುಕೊಳ್ಳಲಾರಂಭಿಸಿದ್ದರು.</p>.<p>ಹತ್ತು ನಿಮಿಷ ನಡೆದ ಅವರಿಬ್ಬರ ಗಲಾಟೆಯಿಂದ ಎರಡೂ ಕಾರುಗಳು ರಸ್ತೆಯಲ್ಲೇ ಇದ್ದವು. ಅವುಗಳ ಹಿಂದೆಯೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಂದಕ್ಕೆ ಹೋಗಲು ಸಹ ಜಾಗವಿರಲಿಲ್ಲ. ಟ್ರಿನಿಟಿ ವೃತ್ತದಿಂದ ಹಲಸೂರು ಸಿಗ್ನಲ್ವರೆಗೂ ಸಂಚಾರ ದಟ್ಟಣೆ ಉಂಟಾಯಿತು.</p>.<p>ಮೆಟ್ರೊ ಕಾಮಗಾರಿ ನಿಮಿತ್ತ ಕಾಮರಾಜ ರಸ್ತೆ ಬಂದ್ ಆಗಿದ್ದು, ಪರ್ಯಾಯ ಮಾರ್ಗದ ಮೂಲಕ ಬಂದಿದ್ದ ಚಾಲಕರು ದಟ್ಟಣೆಯಿಂದ ಸಿಲುಕಿ ಪರದಾಡುವಂತಾಯಿತು. ಕೆಲವರು ಕಾರಿನಿಂದ ಇಳಿದು, ಗಲಾಟೆ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು.</p>.<p>ಅಷ್ಟರಲ್ಲೇ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ‘ಟೈಗರ್’ ವಾಹನದ ಮೂಲಕ ಎರಡೂ ಕಾರುಗಳನ್ನು ಟೋಯಿಂಗ್ ಮಾಡಿಕೊಂಡು ಹೋದರು. ನಂತರವೇ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>