<p><strong>ಬೆಂಗಳೂರು</strong>: ‘ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡಿದ್ದ ನಾಗರಾಜ್ ಎಂಬಾತ, ನನ್ನಿಂದ ₹ 5 ಸಾವಿರ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ಶರತ್ ಎಂಬುವರು ಅನ್ನಪೂರ್ಣೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಅತ್ತಿಗುಪ್ಪೆ ನಿವಾಸಿ ಶರತ್ ನೀಡಿರುವ ದೂರು ಆಧರಿಸಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆಟೊಮೊಬೈಲ್ ಮಳಿಗೆಯಲ್ಲಿ ಶರತ್ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಶರಣಬಸವ ಎಂಬಾತ ₹ 90 ಸಾವಿರ ಪಡೆದು ವಂಚಿಸಿದ್ದ. ಅದನ್ನು ತಿಳಿದುಕೊಂಡಿದ್ದ ನಾಗರಾಜ್, ‘ನಾನು ಸಿಸಿಬಿ ಪೊಲೀಸ್. ಶರಣಬಸವನನ್ನು ಬಂಧಿಸಿ ಹಣ ವಾಪಸು ಕೊಡಿಸುತ್ತೇನೆ. ಸ್ವಲ್ಪ ಹಣ ಖರ್ಚಾಗುತ್ತದೆ’ ಎಂದಿದ್ದ. ನಂತರ, ₹ 5 ಸಾವಿರ ಪಡೆದು ನಾಪತ್ತೆಯಾಗಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡಿದ್ದ ನಾಗರಾಜ್ ಎಂಬಾತ, ನನ್ನಿಂದ ₹ 5 ಸಾವಿರ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ಶರತ್ ಎಂಬುವರು ಅನ್ನಪೂರ್ಣೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಅತ್ತಿಗುಪ್ಪೆ ನಿವಾಸಿ ಶರತ್ ನೀಡಿರುವ ದೂರು ಆಧರಿಸಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಆಟೊಮೊಬೈಲ್ ಮಳಿಗೆಯಲ್ಲಿ ಶರತ್ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಶರಣಬಸವ ಎಂಬಾತ ₹ 90 ಸಾವಿರ ಪಡೆದು ವಂಚಿಸಿದ್ದ. ಅದನ್ನು ತಿಳಿದುಕೊಂಡಿದ್ದ ನಾಗರಾಜ್, ‘ನಾನು ಸಿಸಿಬಿ ಪೊಲೀಸ್. ಶರಣಬಸವನನ್ನು ಬಂಧಿಸಿ ಹಣ ವಾಪಸು ಕೊಡಿಸುತ್ತೇನೆ. ಸ್ವಲ್ಪ ಹಣ ಖರ್ಚಾಗುತ್ತದೆ’ ಎಂದಿದ್ದ. ನಂತರ, ₹ 5 ಸಾವಿರ ಪಡೆದು ನಾಪತ್ತೆಯಾಗಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>