‘ಆಟೊಮೊಬೈಲ್ ಮಳಿಗೆಯಲ್ಲಿ ಶರತ್ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಶರಣಬಸವ ಎಂಬಾತ ₹ 90 ಸಾವಿರ ಪಡೆದು ವಂಚಿಸಿದ್ದ. ಅದನ್ನು ತಿಳಿದುಕೊಂಡಿದ್ದ ನಾಗರಾಜ್, ‘ನಾನು ಸಿಸಿಬಿ ಪೊಲೀಸ್. ಶರಣಬಸವನನ್ನು ಬಂಧಿಸಿ ಹಣ ವಾಪಸು ಕೊಡಿಸುತ್ತೇನೆ. ಸ್ವಲ್ಪ ಹಣ ಖರ್ಚಾಗುತ್ತದೆ’ ಎಂದಿದ್ದ. ನಂತರ, ₹ 5 ಸಾವಿರ ಪಡೆದು ನಾಪತ್ತೆಯಾಗಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿದರು.