ಹೊರ ದೇಶದಲ್ಲಿ ಕುಳಿತು ಜನರನ್ನು ಬೆದರಿಸಿ ಹಫ್ತಾ ವಸೂಲು ಮಾಡುತ್ತಿದ್ದ ರವಿ ಪೂಜಾರಿ, ರೋನಿಯು ದಾವೂದ್ ಇಬ್ರಾಹಿಂಗೆ ಮಣೆ ಹಾಕುವ ಮೂಲಕ ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಭಾವಿಸಿದ್ದ. ಅಲ್ಲದೆ, ತನ್ನ ಬೇಡಿಕೆ ಈಡೇರಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.