‘ಆರೋಪಿಯ ತಂದೆ, ಕೆಎಸ್ ಆರ್ಟಿಸಿ ನೌಕರರಾಗಿದ್ದರು. ಅವರು ತೀರಿಕೊಂಡ ಬಳಿಕ ಅನುಕಂಪದ ಆಧಾರದಲ್ಲಿ ಮಗನಿಗೆ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಹೋಗದ ಆರೋಪಿ, ಬಿಸ್ಕೆಟ್ ಮಾರಾಟ ಏಜೆನ್ಸಿ ಹೆಸರಿನಲ್ಲಿ ಜನರನ್ನು ವಂಚಿಸಲಾರಂಭಿಸಿದ್ದ.ಸದ್ಯ ಐವರು ಮಾತ್ರ ದೂರು ನೀಡಿದ್ದು, ಬೇರೆ ಯಾರಾದರೂ ವಂಚನೆಗೀಡಾಗಿದ್ದರೆ, ದೂರು ನೀಡ ಬಹುದು’ ಎಂದೂ ಮೂಲಗಳು ಹೇಳಿವೆ.