‘ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ತಂಗಿಯ ಮಗ ಅರ್ಶದ್ ಮೂಲಕ ಆರೋಪಿ ಸ್ವರೂಪ್, ಮೊಹಮ್ಮದ್ ರಫೀ ಅವರಿಗೆ ಪರಿಚಯವಾಗಿದ್ದರು. ‘ಅರ್ಶದ್ ನನ್ನ ಬಳಿ ಸಾಲ ಪಡೆದು ವಾಪಸು ಕೊಟ್ಟಿಲ್ಲ’ ಎಂದು ಹೇಳಿ ಆರೋಪಿ, ದೂರುದಾರರ ಬಳಿ ಆರಂಭದಲ್ಲಿ ₹ 50 ಸಾವಿರ ಹಣ ಪಡೆದುಕೊಂಡಿದ್ದರು. ‘ಅರ್ಶದ್ ಖಾತೆಗೆ ಸ್ವಾಮೀಜಿಯೊಬ್ಬರು ₹ 25 ಲಕ್ಷ ಜಮೆ ಮಾಡಿದ್ದಾರೆ. ದೊಡ್ಡ ಮೊತ್ತದ ಹಣ ಇದಾಗಿದ್ದರಿಂದ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅರ್ಶದ್ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿದ್ದಾರೆ’ ಎಂದು ಹೇಳಿದ್ದ ಆರೋಪಿ, ತೆರಿಗೆ ಕಟ್ಟಬೇಕೆಂದು ಹಾಗೂ ಆ ಬಳಿಕವೇ ಹಣ ಡ್ರಾ ಮಾಡಿಕೊಳ್ಳಬೇಕೆಂದು ಹೇಳಿ ಹಂತ ಹಂತವಾಗಿ ₹ 48 ಲಕ್ಷ ಪಡೆದಿದ್ದರು. ಅದಕ್ಕೆ ಸಂಬಂಧಪಟ್ಟ ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದರು. ಈ ಸಂಗತಿ ದೂರಿನಲ್ಲಿತ್ತು.’ ಎಂದೂ ಮೂಲಗಳು ತಿಳಿಸಿವೆ.