‘ಮಠದ ಗರ್ಭಗುಡಿಯಲ್ಲಿ ರೇಣುಕಾಚಾರ್ಯರ ಪಂಚಲೋಹದ ವಿಗ್ರಹವಿತ್ತು. ಆಗಾಗ ಮಠಕ್ಕೆ ಭೇಟಿ ನೀಡುತ್ತಿದ್ದ ಆರೋಪಿ, ವಿಗ್ರಹ ನೋಡಿದ್ದ. ನ. 25ರಂದು ಹೆಲ್ಮೆಟ್ ಧರಿಸಿ ಮಠಕ್ಕೆ ಬಂದಿದ್ದ ಆರೋಪಿ, ಗರ್ಭಗುಡಿಯಲ್ಲಿ ಯಾರೂ ಇಲ್ಲದಿದ್ದಾಗ ನಮಸ್ಕರಿಸುವ ನೆಪ ಮಾಡಿ ಒಳಗೆ ಹೋಗಿದ್ದ. ಅಲ್ಲಿದ್ದ ಪಂಚಲೋಹದ ವಿಗ್ರಹವನ್ನು ಕದ್ದು ಪಂಚೆಯಲ್ಲಿ ಸುತ್ತಿಕೊಂಡು ಪರಾರಿಯಾಗಿದ್ದ.’