ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು | ಚಿಟ್‌ ಫಂಡ್‌ ಸಂಸ್ಥೆ ಅಧಿಕಾರಿ ಕೊಲೆ: ಆರೋಪಿ ಬಂಧನ

ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿದ್ದ ಆರೋಪಿ
Published : 9 ಜೂನ್ 2024, 0:17 IST
Last Updated : 9 ಜೂನ್ 2024, 0:17 IST
ಫಾಲೋ ಮಾಡಿ
Comments
ಶ್ರೀನಾಥ್‌
ಶ್ರೀನಾಥ್‌
ಆಂಧ್ರಪ್ರದೇಶದಲ್ಲಿ ಆರೋಪಿ ಬಂಧನ
‘ಆಂಧ್ರಪ್ರದೇಶದಿಂದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಮಾಧವರಾವ್‌ ಬಂದಿದ್ದ. ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಪುತ್ರನ ಜೊತೆಗೆ ನೆಲೆಸಿದ್ದ. ಕೊಲೆ ನಡೆದ ದಿನ ಆರೋಪಿಯ ಪತ್ನಿ ತವರು ಮನೆಗೆ ತೆರಳಿದ್ದರು. ಶ್ರೀನಾಥ್‌ ಮನೆಗೆ ಬಂದ ಕೂಡಲೇ ಮಗನನ್ನು ಹೊರಕ್ಕೆ ಕಳುಹಿಸಿದ್ದ. ಮಾಧವರಾವ್‌ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದ’ ಎಂದು ಮೂಲಗಳು ಹೇಳಿವೆ.
ಸಿಗದ ದೇಹದ ತುಂಡುಗಳು
‘ಕಾಲುವೆಯಲ್ಲಿ ಕಲುಷಿತ ನೀರು ಹರಿಯುತ್ತಿದೆ. ಕಳೆಗಿಡಗಳು ಬೆಳೆದಿವೆ. ಈ ನಡುವೆ ಧಾರಾಕಾರ ಮಳೆ ಸುರಿದ ಪರಿಣಾಮ ಕಾಲುವೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ದೇಹದ ತುಂಡುಗಳನ್ನು ತುಂಬಿದ್ದ ಚೀಲ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ. ಚೀಲ ಹುಡುಕಲು ಮಂಗಳೂರಿನಿಂದ ಮುಳುಗು ತಜ್ಞರನ್ನು ಕರೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT