<figcaption>"ಖಾಲಿ ಖಾಲಿ ಚರ್ಚ್ ಸ್ಟ್ರೀಟ್ ನಲ್ಲಿ ದಂಪತಿ ನಡೆದು ಹೋಗುತ್ತಿರುವ ದೃಶ್ಯ - ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ."</figcaption>.<p><strong>ಬೆಂಗಳೂರು:</strong> ಚರ್ಚ್ಸ್ಟ್ರೀಟ್ನಲ್ಲಿ 2021ರ ಫೆಬ್ರುವರಿವರೆಗೆ ಎಲ್ಲ ವಾರಾಂತ್ಯಗಳಲ್ಲಿ ಹೊಗೆ ಉಗುಳುವ ಮೋಟಾರು ವಾಹನಗಳ ಸಂಚಾರ ನಿಷೇಧಿಸುವ 'ಶುದ್ಧ ಗಾಳಿಯ ಬೀದಿ’ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿದ ಅವರು, 'ನಗರ ಭೂ ಸಾರಿಗೆ ನಿರ್ದೇಶನಾಲಯಹಾಗೂ ಯು.ಕೆ ಕ್ಯಾಟಪಲ್ಟ್ ಸಂಸ್ಥೆಯ ಸಹಯೋಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ' ಎಂದರು.</p>.<p>'ಶುದ್ಧಗಾಳಿ ಮತ್ತು ನೀರು ಪ್ರತಿ ನಾಗರೀಕನ ಹಕ್ಕು. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಪ್ರತಿ ವರ್ಷ ಶೇ 10ರಷ್ಟು ಏರುತ್ತಿದೆ. ಈ ಮಧ್ಯೆಯೂ ಸೈಕಲ್ ಬಳಕೆ, ನಡಿಗೆಗೆ ಯುವಜನ ಆದ್ಯತೆ ನೀಡಿರುವುದು ಆಶಾದಾಯಕ' ಎಂದರು.</p>.<p>ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, 'ವಾಣಿಜ್ಯ ಚಟುವಟಿಕೆಗಳಿಗೆ ಹೆಸರಾದ ಚರ್ಚ್ಸ್ಟ್ರೀಟ್ನಲ್ಲಿ ಜನಸಂದಣಿಯೂ ಹೆಚ್ಚು. ಈ ಯೋಜನೆಯಿಂದ ವಾರಾಂತ್ಯದಲ್ಲಿ ಪರಿಸರಸ್ನೇಹಿ ಸೈಕಲ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಮಾತ್ರ ಇರಲಿದೆ. ಮಾಲಿನ್ಯರಹಿತ ಶುದ್ಧಗಾಳಿ ಬೀಸಲಿದೆ. ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು' ಎಂದು ಹೇಳಿದರು.</p>.<p>'ಈ ಯೋಜನೆಯು ಬೆಂಗಳೂರನ್ನು ಭವಿಷ್ಯದಲ್ಲಿ ದೆಹಲಿ, ಮುಂಬೈನಂತೆ ಸಂಚಾರ ದಟ್ಟಣೆ, ವಾಯುಮಾಲಿನ್ಯ ತುಂಬಿಕೊಂಡ ನಗರ ಎಂದು ಕರೆಯು ವುದನ್ನು ತಡೆಯಲಿದೆ' ಎಂದು ಶಾಸಕ ಎನ್.ಎ.ಹ್ಯಾರಿಸ್ ಅಭಿಪ್ರಾಯಪಟ್ಟರು.</p>.<p>ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, 'ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯರಾತ್ರಿ 12ರವರೆಗೆ ಈ ಬೀದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಯೋಜನೆಯ ಅವಧಿಯಲ್ಲಿ ಚರ್ಚ್ಸ್ಟ್ರೀಟ್ನ ವಾಯುಮಾಲಿನ್ಯ ಎಷ್ಟು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಪರೀಕ್ಷಿಸಲಾಗುವುದು. ಇದು ಯಶಸ್ವಿಯಾದರೆ ನಗರದ ಬೇರೆ ಸ್ಥಳಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು' ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>"ಖಾಲಿ ಖಾಲಿ ಚರ್ಚ್ ಸ್ಟ್ರೀಟ್ ನಲ್ಲಿ ದಂಪತಿ ನಡೆದು ಹೋಗುತ್ತಿರುವ ದೃಶ್ಯ - ಪ್ರಜಾವಾಣಿ ಚಿತ್ರ. ಅನೂಪ್ ರಾಘ. ಟಿ."</figcaption>.<p><strong>ಬೆಂಗಳೂರು:</strong> ಚರ್ಚ್ಸ್ಟ್ರೀಟ್ನಲ್ಲಿ 2021ರ ಫೆಬ್ರುವರಿವರೆಗೆ ಎಲ್ಲ ವಾರಾಂತ್ಯಗಳಲ್ಲಿ ಹೊಗೆ ಉಗುಳುವ ಮೋಟಾರು ವಾಹನಗಳ ಸಂಚಾರ ನಿಷೇಧಿಸುವ 'ಶುದ್ಧ ಗಾಳಿಯ ಬೀದಿ’ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿದ ಅವರು, 'ನಗರ ಭೂ ಸಾರಿಗೆ ನಿರ್ದೇಶನಾಲಯಹಾಗೂ ಯು.ಕೆ ಕ್ಯಾಟಪಲ್ಟ್ ಸಂಸ್ಥೆಯ ಸಹಯೋಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ' ಎಂದರು.</p>.<p>'ಶುದ್ಧಗಾಳಿ ಮತ್ತು ನೀರು ಪ್ರತಿ ನಾಗರೀಕನ ಹಕ್ಕು. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಪ್ರತಿ ವರ್ಷ ಶೇ 10ರಷ್ಟು ಏರುತ್ತಿದೆ. ಈ ಮಧ್ಯೆಯೂ ಸೈಕಲ್ ಬಳಕೆ, ನಡಿಗೆಗೆ ಯುವಜನ ಆದ್ಯತೆ ನೀಡಿರುವುದು ಆಶಾದಾಯಕ' ಎಂದರು.</p>.<p>ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, 'ವಾಣಿಜ್ಯ ಚಟುವಟಿಕೆಗಳಿಗೆ ಹೆಸರಾದ ಚರ್ಚ್ಸ್ಟ್ರೀಟ್ನಲ್ಲಿ ಜನಸಂದಣಿಯೂ ಹೆಚ್ಚು. ಈ ಯೋಜನೆಯಿಂದ ವಾರಾಂತ್ಯದಲ್ಲಿ ಪರಿಸರಸ್ನೇಹಿ ಸೈಕಲ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಮಾತ್ರ ಇರಲಿದೆ. ಮಾಲಿನ್ಯರಹಿತ ಶುದ್ಧಗಾಳಿ ಬೀಸಲಿದೆ. ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು' ಎಂದು ಹೇಳಿದರು.</p>.<p>'ಈ ಯೋಜನೆಯು ಬೆಂಗಳೂರನ್ನು ಭವಿಷ್ಯದಲ್ಲಿ ದೆಹಲಿ, ಮುಂಬೈನಂತೆ ಸಂಚಾರ ದಟ್ಟಣೆ, ವಾಯುಮಾಲಿನ್ಯ ತುಂಬಿಕೊಂಡ ನಗರ ಎಂದು ಕರೆಯು ವುದನ್ನು ತಡೆಯಲಿದೆ' ಎಂದು ಶಾಸಕ ಎನ್.ಎ.ಹ್ಯಾರಿಸ್ ಅಭಿಪ್ರಾಯಪಟ್ಟರು.</p>.<p>ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, 'ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯರಾತ್ರಿ 12ರವರೆಗೆ ಈ ಬೀದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಯೋಜನೆಯ ಅವಧಿಯಲ್ಲಿ ಚರ್ಚ್ಸ್ಟ್ರೀಟ್ನ ವಾಯುಮಾಲಿನ್ಯ ಎಷ್ಟು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಪರೀಕ್ಷಿಸಲಾಗುವುದು. ಇದು ಯಶಸ್ವಿಯಾದರೆ ನಗರದ ಬೇರೆ ಸ್ಥಳಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು' ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>