ಬೆಂಗಳೂರು: ನಗರದ ಬನ್ನೇರುಘಟ್ಟ ಮುಖ್ಯರಸ್ತೆಯ ಸೌತ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಶನಿವಾರ ಜಗನ್ನಾಥ ರಥಯಾತ್ರೆಯು ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಸೌತ್ ಸಿಟಿ ಓಡಿಯಾ ಸಮಿತಿ (ಉತ್ಕಲ) ಹಾಗೂ ಸುಗೃಹ (ಸೌತ್ ಸಿಟಿ ಗ್ರೂಪ್ ಹೌಸಿಂಗ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್) ಸಹಯೋಗದಲ್ಲಿ ಮೂರನೇ ವರ್ಷದ ರಥಯಾತ್ರೆ ನಡೆಯಿತು.
ಅಪಾರ್ಟ್ಮೆಂಟ್ ನಿವಾಸಿಗಳು ಜಗನ್ನಾಥ, ಬಾಲಭದ್ರ, ಸುಭದ್ರರನ್ನು ಭಕ್ತಿಯಿಂದ ಬರಮಾಡಿಕೊಂಡರು. ಪೂಜೆ ಹಾಗೂ ಆರತಿ ನೆರವೇರಿತು. ನೂರಾರು ಮಂದಿ ರಥ ಎಳೆದು ಭಕ್ತಿ ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.