ಬಸ್ ಸಿಗದಿದ್ದರಿಂದ ಮಳಿಗೆ ಎದುರು ನಿದ್ದೆ: ‘ಬಾಲಕಿ ಪೋಷಕರು ಹಾಗೂ ಸಂಬಂಧಿಕರು, ನಿಲ್ದಾಣದಲ್ಲಿ ತಡರಾತ್ರಿಯವರೆಗೂ ಕಾದರೂ ಬಸ್ ಸಿಕ್ಕಿರಲಿಲ್ಲ. ನಿಲ್ದಾಣದಲ್ಲಿ ಮಲಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನಿಲ್ದಾಣದಿಂದ ನಡೆದುಕೊಂಡು ಕೆ.ಆರ್. ಮಾರುಕಟ್ಟೆ ಪ್ರದೇಶಕ್ಕೆ ಬಂದಿದ್ದರು. ತೆಂಗಿನಕಾಯಿ ಮಂಡಿಯ ಮಳಿಗೆಗಳ ಎದುರು ಖುಲ್ಲಾ ಜಾಗವಿದ್ದು, ಅಲ್ಲಿಯೇ ಮಲಗಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.