ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೊವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮಾಜಿ ಮೇಯರ್ ಶಹತಾಜ್ ಖಾನಂ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅವಹೇಳನಕಾರಿಯಾಗಿ ಫೋಟೊವನ್ನು ತಿರುಚಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಮಾಜಿ ಮೇಯರ್ ಶಹತಾಜ್ ಖಾನಂ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಕಿರಣ್ ಆರಾಧ್ಯ ಎಂಬುವರು ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಎಫ್ಐಆರ್ ಈಗ ದಾಖಲಾಗಿದೆ.
’ಮೂವರೂ ರಾಜಕೀಯ ನಾಯಕರ ಫೋಟೊ ತಿರುಚಿ ಸಾರ್ವಜನಿಕ ವಲಯದಲ್ಲಿ ಅವಹೇಳನ ಮಾಡಲಾಗಿದೆ’ ಎಂದೂ ಕಿರಣ್ ದೂರಿದ್ದಾರೆ.