ಮೇಡಿ ಆಗ್ರಹಾರ ಗ್ರಾಮದಲ್ಲಿ ಬಡಾವಣೆ ನಕ್ಷೆ ಪ್ರಕಾರ ಹಂಚಿಕೆ ಮಾಡಿರುವ 206 ನಿವೇಶನಗಳಿಗೆ ಸರ್ಕಾರ ನಿಗದಿಪಡಿಸಿರುವ ಒಂದು ನಿವೇಶನಕ್ಕೆ ₹ 12 ಸಾವಿರ ಹಣ ಪಾವತಿಸಿದೆ. ಬಡಾವಣೆಯಲ್ಲಿ ವಿದ್ಯುತ್, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ ಈ ಕಾರಣಕ್ಕಾಗಿ ಮನೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಈಗ ನಿವೇಶನಗಳನ್ನು ಮರು ಹಂಚಿಕೆಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿರುವುದು ಸರಿಯಲ್ಲ ಎಂದು ನಗರ ಪ್ರಧಾನ ಸಂಚಾಲಕ ಮುನಿನಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.