ಬಳಿಕ ಮಾತನಾಡಿದ ಅಭಿಷೇಕ್ ದತ್, ‘ಇದೇ ಮೊದಲ ಬಾರಿಗೆ ಮತ ಚಲಾಯಿಸುವ ಅವಕಾಶ ಪಡೆದಿರುವವರನ್ನು ಗುರುತಿಸಿ, ಮತದಾನ ಮಾಡುವಂತೆ ಅವರನ್ನು ಉತ್ತೇಜಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ. ನಿರುದ್ಯೋಗ ನಿವಾರಣೆ ಮತ್ತು ಜೀವನ ನಿರ್ವಹಣೆಗೆ ಕಾಂಗ್ರೆಸ್ ಪಕ್ಷವು ನೀಡಿರುವ ಭರಸವೆಗಳ ಅನುಷ್ಠಾನದ ಕುರಿತು ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನೂ ಮಾಡಲಾಗುವುದು’ ಎಂದರು.