<p><strong>ಬೆಂಗಳೂರು: </strong>ಬಕ್ರೀದ್ಗಾಗಿ ನಗರದಲ್ಲಿ ಬಂದೋಬಸ್ತ್ ಪರಿಶೀಲಿಸಲು ತೆರಳಿದ್ದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಕೆ.ಜಿ.ಹಳ್ಳಿ ಠಾಣೆಯ ಕಾನ್ಸ್ಟೆಬಲ್ವೊಬ್ಬರ ಕಾರ್ಯವೈಖರಿ ಮೆಚ್ಚಿ ಸನ್ಮಾನಿಸಿದರು.</p>.<p>ಕೆ.ಜಿ.ಹಳ್ಳಿ ಠಾಣೆಯ ಗುಪ್ತಚರ ವಿಭಾಗದ ಕಾನ್ಸ್ಟೆಬಲ್ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.</p>.<p>ಬಕ್ರೀದ್ ಪೂರ್ವಭಾವಿಯಾಗಿ ಮಂಗಳವಾರ ರಾತ್ರಿ ಕೋರಮಂಗಲ, ಬಾಣಸವಾಡಿ, ಚಾಮರಾಜಪೇಟೆ, ಜಯನಗರ,ಹೆಣ್ಣೂರು, ಪಾದರಾಯನಪುರ, ಗೋವಿಂದನಗರ, ಶಿವಾಜಿನಗರ ಸೇರಿದಂತೆ ಹಲವು ಠಾಣೆಗಳಿಗೆ ಬಂದೋಬಸ್ತ್ ಪರಿಶೀಲನೆಗೆ ಕಮಲ್ ಪಂತ್ ತೆರಳಿದ್ದರು.</p>.<p>ಈ ವೇಳೆ ಕೆ.ಜಿ.ಹಳ್ಳಿ ಠಾಣೆಯ ಬಳಿ ಮುಸ್ಲಿಂ ಸಮುದಾಯದ ಮುಖಂಡರು ಶಾಲು, ಹಾರದೊಂದಿಗೆ ಪಂತ್ ಅವರನ್ನು ಸನ್ಮಾನಿಸಲು ಮುಂದಾದರು.</p>.<p>‘ಸನ್ಮಾನ ಮಾಡಬೇಕಿರುವುದು ನನಗೆ ಅಲ್ಲ. ಸದಾ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ’ ಎಂದು ಪ್ರತಿಕ್ರಿಯಿಸಿದ ಅವರು, ಠಾಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುವ ಸಿಬ್ಬಂದಿ ಯಾರೆಂದು ಹಿರಿಯ ಅಧಿಕಾರಿಗಳನ್ನು ಕೇಳಿದರು.</p>.<p>ಈ ವೇಳೆ ಕಾನ್ಸ್ಟೆಬಲ್ ಶಿವಕುಮಾರ್ ಹೆಸರನ್ನು ಅಧಿಕಾರಿಗಳು ಸೂಚಿಸಿದ್ದರು.ಆಗ ಮುಖಂಡರು ತಂದಿದ್ದ ಶಾಲು ಹೊದಿಸಿ, ಹಾರ ಹಾಕಿ ಶಿವಕುಮಾರ್ ಅವರನ್ನು ಸನ್ಮಾನಿಸಿದರು.</p>.<p>‘ಕಮಲ್ ಪಂತ್ ಅವರಿಂದ ಅನಿರೀಕ್ಷಿತವಾಗಿ ಸನ್ಮಾನ ಮಾಡಿಸಿಕೊಂಡಿದ್ದು ಸಂತಸ ತಂದಿದೆ. ಕರ್ತವ್ಯದಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬಕ್ರೀದ್ಗಾಗಿ ನಗರದಲ್ಲಿ ಬಂದೋಬಸ್ತ್ ಪರಿಶೀಲಿಸಲು ತೆರಳಿದ್ದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಕೆ.ಜಿ.ಹಳ್ಳಿ ಠಾಣೆಯ ಕಾನ್ಸ್ಟೆಬಲ್ವೊಬ್ಬರ ಕಾರ್ಯವೈಖರಿ ಮೆಚ್ಚಿ ಸನ್ಮಾನಿಸಿದರು.</p>.<p>ಕೆ.ಜಿ.ಹಳ್ಳಿ ಠಾಣೆಯ ಗುಪ್ತಚರ ವಿಭಾಗದ ಕಾನ್ಸ್ಟೆಬಲ್ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.</p>.<p>ಬಕ್ರೀದ್ ಪೂರ್ವಭಾವಿಯಾಗಿ ಮಂಗಳವಾರ ರಾತ್ರಿ ಕೋರಮಂಗಲ, ಬಾಣಸವಾಡಿ, ಚಾಮರಾಜಪೇಟೆ, ಜಯನಗರ,ಹೆಣ್ಣೂರು, ಪಾದರಾಯನಪುರ, ಗೋವಿಂದನಗರ, ಶಿವಾಜಿನಗರ ಸೇರಿದಂತೆ ಹಲವು ಠಾಣೆಗಳಿಗೆ ಬಂದೋಬಸ್ತ್ ಪರಿಶೀಲನೆಗೆ ಕಮಲ್ ಪಂತ್ ತೆರಳಿದ್ದರು.</p>.<p>ಈ ವೇಳೆ ಕೆ.ಜಿ.ಹಳ್ಳಿ ಠಾಣೆಯ ಬಳಿ ಮುಸ್ಲಿಂ ಸಮುದಾಯದ ಮುಖಂಡರು ಶಾಲು, ಹಾರದೊಂದಿಗೆ ಪಂತ್ ಅವರನ್ನು ಸನ್ಮಾನಿಸಲು ಮುಂದಾದರು.</p>.<p>‘ಸನ್ಮಾನ ಮಾಡಬೇಕಿರುವುದು ನನಗೆ ಅಲ್ಲ. ಸದಾ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ’ ಎಂದು ಪ್ರತಿಕ್ರಿಯಿಸಿದ ಅವರು, ಠಾಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುವ ಸಿಬ್ಬಂದಿ ಯಾರೆಂದು ಹಿರಿಯ ಅಧಿಕಾರಿಗಳನ್ನು ಕೇಳಿದರು.</p>.<p>ಈ ವೇಳೆ ಕಾನ್ಸ್ಟೆಬಲ್ ಶಿವಕುಮಾರ್ ಹೆಸರನ್ನು ಅಧಿಕಾರಿಗಳು ಸೂಚಿಸಿದ್ದರು.ಆಗ ಮುಖಂಡರು ತಂದಿದ್ದ ಶಾಲು ಹೊದಿಸಿ, ಹಾರ ಹಾಕಿ ಶಿವಕುಮಾರ್ ಅವರನ್ನು ಸನ್ಮಾನಿಸಿದರು.</p>.<p>‘ಕಮಲ್ ಪಂತ್ ಅವರಿಂದ ಅನಿರೀಕ್ಷಿತವಾಗಿ ಸನ್ಮಾನ ಮಾಡಿಸಿಕೊಂಡಿದ್ದು ಸಂತಸ ತಂದಿದೆ. ಕರ್ತವ್ಯದಲ್ಲಿ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>