ಲೇಖಕ ಪುರುಷೋತ್ತಮ ಬಿಳಿಮಲೆ, ‘2022ರಲ್ಲಿ ಜನಗಣತಿ ಆಗಿದ್ದರೆ ರಾಜ್ಯದಲ್ಲಿರುವ 28 ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದವು. ಇಡೀ ದಕ್ಷಿಣ ಭಾರತದಲ್ಲಿ 170 ಲೋಕಸಭೆ ಕ್ಷೇತ್ರಗಳಿವೆ. ಆದರೆ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಒಟ್ಟು ಸಂಸತ್ ಕ್ಷೇತ್ರಗಳು ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆಗೆ ಸಮಾನವಾಗುತ್ತವೆ. ಆದ್ದರಿಂದ ಅಲ್ಲಿನ ಸಂಸದರಿಗೆ ಸಿಗುವ ಗೌರವ ಈ ಭಾಗದವರಿಗೂ ಸಿಗಬೇಕು. ಇದು ಒಕ್ಕೂಟ ವ್ಯವಸ್ಥೆಯ ಉದ್ದೇಶ. ಇಲ್ಲದಿದ್ದರೆ, ಪ್ರಸ್ತುತ ದೇಶದ ಈಶಾನ್ಯ ರಾಜ್ಯಗಳಲ್ಲಿ ಏನಾಗುತ್ತಿದೆಯೂ ಅದು ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲೂ ಆಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.