ನೂರಾರು ಕಲಾವಿದರು ದಾರಿ ತೋಚದೆ ಕಂಗಾಲಾಗಿರುವ ಈ ಸಂದರ್ಭದಲ್ಲಿಕಲಾವಿದರಾದ ಜಿ. ಚನ್ನಕೇಶವ, ಸಿದ್ದಾರ್ಥ್ ಮಾಧ್ಯಮಿಕ, ಅನಿಲ್ ಕುಮಾರ್, ಕೆ.ಪಿ. ಲಕ್ಷಣ ಹಾಗೂ ಚಂದ್ರು ನೀನಾಸಂ ಸೇರಿಕೊಂಡು ನಗರದ ನಂದಿನಿ ಲೇಔಟ್ ಉದ್ಯಾನದ ಬಳಿ ‘ಹೋ!! ಟೆಲ್ ಆರ್ಟ್ ಟೇಸ್ಟ್’ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದಾರೆ. ಮನೆಯಲ್ಲಿಯೇ ಊಟ–ತಿಂಡಿಗಳನ್ನು ತಯಾರಿಸಿ ಜೀವನೋಪಾಯ ಕಂಡು
ಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವ ಹಂಬಲ ಇರುವವರಿಗೆ ಮಾದರಿಯಾಗಿದ್ದಾರೆ.