ಬೆಂಗಳೂರು:ನಗರದ ಅಗ್ನಿಶಾಮಕ ದಳದ 14 ಮಂದಿಗೆ ಕೊರೊನಾ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ನಗರದ ಎಂ.ಎಸ್. ಬಿಲ್ಡಿಂಗ್, ರಾಜಾಜಿನಗರ, ನಾಗರಬಾವಿ, ಸುಂಕದ ಕಟ್ಟೆ, ಯಶವಂತಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಶುಕ್ರವಾರ ರಾತ್ರಿ 9 ಗಂಟೆಗೆ ವರದಿ ಬಂದಿದ್ದು, 14 ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿದೆ.
ಸೋಂಕಿನ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಹೇಳಿದ್ದಾರೆ. ಎರಡು ಗಂಟೆಯಿಂದ ಆ್ಯಂಬುಲೆನ್ಸ್ಗಾಗಿ ತಮ್ಮ ಮನೆ ಹಾಗೂ ಕಚೇರಿ ಬಳಿಯೇ ಅಗ್ನಿಶಾಮಕ ಸಿಬ್ಬಂದಿ ಕಾಯುತ್ತಿದ್ದಾರೆ. ಆದರೆ, ಆಂಬ್ಯುಲೆನ್ಸ್ ಬಂದಿಲ್ಲ.