ಬೆಂಗಳೂರಿನಲ್ಲಿ ಮೇ 6ರ ವೇಳೆಗೆ ಪ್ರಕರಣಗಳ ಸಂಖ್ಯೆ 287ಕ್ಕೆ ಹೆಚ್ಚಬಹುದು. ಮೈಸೂರಿನಲ್ಲಿ 142, ಕಲಬುರ್ಗಿಯಲ್ಲಿ 97 ಪ್ರಕರಣಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ‘ಇದೊಂದು ಅಂದಾಜು ಮಾತ್ರ,ಸಂದರ್ಭಕ್ಕೆ ತಕ್ಕಂತೆ ಇದು ಬದಲಾಗಬಹುದು. ಇದಕ್ಕೊಂದು ನಿರ್ದಿಷ್ಟ ಮಾನದಂಡ ಇಲ್ಲ. ನಗರದ ಪಾದರಾಯನಪುರ ಪ್ರಕರಣ ಇಡೀ ಚಿತ್ರಣವನ್ನೇ ಬದಲಿಸಿತ್ತಲ್ಲ. ಅದು ಬಹಳ ಅನರೀಕ್ಷಿತವಾಗಿತ್ತು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.