<p><strong>ಬೆಂಗಳೂರು</strong>: ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಿರ್ಮಿಸಿರುವ ’ಕೋವಿಡ್ ಕೇರ್’ ಕೇಂದ್ರದಲ್ಲಿ ಅಕ್ರಮವಾಗಿ ಮದ್ಯ ಪೂರೈಕೆ ಆಗುತ್ತಿರುವ ಅನುಮಾನ ವ್ಯಕ್ತವಾಗಿದೆ.</p>.<p>ಬುಧವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಕೇಂದ್ರದೊಳಗೆ ತೆರಳುತ್ತಿದ್ದ ಯುವಕನೊಬ್ಬ ಮದ್ಯದ ಪೊಟ್ಟಣಗಳ ಸಮೇತ ಬಿಬಿಎಂಪಿ ಮಾರ್ಷಲ್ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೇಂದ್ರವಿದ್ದು, ಮದ್ಯ ಪೂರೈಕೆ ಬಗ್ಗೆ ತಡರಾತ್ರಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.</p>.<p>ಕೇಂದ್ರಕ್ಕೆ ಬರುವ ಹಾಗೂ ಹೊರಗೆ ಹೋಗುವವರನ್ನು ತಪಾಸಣೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವಕನ ಬಳಿ ಮದ್ಯದ ಎರಡು ಟೆಟ್ರಾ ಪೊಟ್ಟಣ ಸಿಕ್ಕಿದ್ದರಿಂದಾಗಿ ಮಾರ್ಷಲ್ಗಳು ವಿಚಾರಣೆ ನಡೆಸಿದ್ದರು.</p>.<p>‘ಕೇಂದ್ರದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತೇನೆ. ನನ್ನ ವೈಯಕ್ತಿಕ ಬಳಕೆಗಾಗಿ ಈ ಮದ್ಯದ ಪೊಟ್ಟಣ ಇಟ್ಟುಕೊಂಡಿದ್ದೇನೆ’ ಎಂದು ಯುವಕ ಹೇಳಿದ್ದ. ನಂತರ ಆತನನ್ನು ಬಿಟ್ಟು ಕಳುಹಿಸಿರುವ ಮಾರ್ಷಲ್ಗಳು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಿರ್ಮಿಸಿರುವ ’ಕೋವಿಡ್ ಕೇರ್’ ಕೇಂದ್ರದಲ್ಲಿ ಅಕ್ರಮವಾಗಿ ಮದ್ಯ ಪೂರೈಕೆ ಆಗುತ್ತಿರುವ ಅನುಮಾನ ವ್ಯಕ್ತವಾಗಿದೆ.</p>.<p>ಬುಧವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಕೇಂದ್ರದೊಳಗೆ ತೆರಳುತ್ತಿದ್ದ ಯುವಕನೊಬ್ಬ ಮದ್ಯದ ಪೊಟ್ಟಣಗಳ ಸಮೇತ ಬಿಬಿಎಂಪಿ ಮಾರ್ಷಲ್ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೇಂದ್ರವಿದ್ದು, ಮದ್ಯ ಪೂರೈಕೆ ಬಗ್ಗೆ ತಡರಾತ್ರಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.</p>.<p>ಕೇಂದ್ರಕ್ಕೆ ಬರುವ ಹಾಗೂ ಹೊರಗೆ ಹೋಗುವವರನ್ನು ತಪಾಸಣೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವಕನ ಬಳಿ ಮದ್ಯದ ಎರಡು ಟೆಟ್ರಾ ಪೊಟ್ಟಣ ಸಿಕ್ಕಿದ್ದರಿಂದಾಗಿ ಮಾರ್ಷಲ್ಗಳು ವಿಚಾರಣೆ ನಡೆಸಿದ್ದರು.</p>.<p>‘ಕೇಂದ್ರದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತೇನೆ. ನನ್ನ ವೈಯಕ್ತಿಕ ಬಳಕೆಗಾಗಿ ಈ ಮದ್ಯದ ಪೊಟ್ಟಣ ಇಟ್ಟುಕೊಂಡಿದ್ದೇನೆ’ ಎಂದು ಯುವಕ ಹೇಳಿದ್ದ. ನಂತರ ಆತನನ್ನು ಬಿಟ್ಟು ಕಳುಹಿಸಿರುವ ಮಾರ್ಷಲ್ಗಳು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>