ಬೆಂಗಳೂರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಸಾಕಷ್ಟು ಪ್ರಯಾಣಿಕರು ಇದ್ದಾರೆ. ಅವರಿಗೆ ತಿನ್ನಲು ಏನು ಇಲ್ಲ. ಅವರಿಗೆ ಮ್ಯಾಕ್ಟ್ ಟ್ರಸ್ಟ್ ವತಿಯಿಂದ ಟೀ ಹಾಗೂ ಬಿಸ್ಕೆಟ್ ವಿತರಣೆ ಮಾಡಲಾಗುತ್ತಿದೆ.
ಬಹಳ ಜನಕ್ಕೆ ಕರ್ಫ್ಯೂ ಇರುವುದು ಗೊತ್ತಿಲ್ಲ. ಅವರೆಲ್ಲ ನಿಲ್ದಾಣದಲ್ಲಿ ಸೇರಿದ್ದಾರೆ. ಅವರಿಗೆ ಮಾನವೀಯತೆ ದೃಷ್ಟಿಯಿಂದ ನಾವೇ ಮನೆಯಲ್ಲಿ ಟೀ ಮಾಡಿಕೊಂಡು ಬಂದು ವಿತರಣೆ ಮಾಡುತ್ತಿದ್ದೇವೆ ಎಂದು ಟ್ರಸ್ಟ್ ಸದಸ್ಯ ಮಹಮ್ಮದ್ ಪ್ರಜಾವಾಣಿಗೆ ತಿಳಿಸಿದರು.