‘ಆಟಗಾರರನ್ನು ಬೆಂಗಳೂರಿಗೆ ಕರೆಸಿದ್ದ ಸಂಸ್ಥೆ,ಸಂಪಿಗೆಹಳ್ಳಿಯ ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಅರ್ಹತಾ ಪಂದ್ಯಗಳನ್ನು ನಡೆಸಿತ್ತು. ಯಾರನ್ನೂ ಆಯ್ಕೆ ಮಾಡದೇ ಇನ್ನೊಮ್ಮೆ ಶುಲ್ಕ ಪಾವತಿ ಮಾಡಿ ಬರುವಂತೆ ಸಂಸ್ಥೆಯ ಸಿಬ್ಬಂದಿ ಹೇಳಿದ್ದರು. ಸಂಸ್ಥೆಯ ವಂಚನೆ ಅರಿತ ಕೆಲ ಆಟಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲೇ ತರಬೇತುದಾರರು ಪರಾರಿಯಾಗಿದ್ದಾರೆ’ ಎಂದು ಆಟಗಾರ ಹೇಳಿದರು.