<p><strong>ಬೆಂಗಳೂರು: </strong>ಬಿಜೆಪಿ ನಾಯಕರು ತನಗೆ ಆಪ್ತರೆಂದು ಹೇಳಿಕೊಂಡು, ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ನಾಗರಬಾವಿಯ ಯುವರಾಜ್ ಎಂಬಾತನ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.</p>.<p>‘ದಾಳಿ ವೇಳೆ ಆರೋಪಿ ಮನೆಯಲ್ಲಿ ಪತ್ತೆಯಾದ ಕೆಲ ದಾಖಲೆಗಳು, ₹26 ಲಕ್ಷ ನಗದು, ಆರೋಪಿ ಹೆಸರು ಉಲ್ಲೇಖಿಸಿರುವ ₹91 ಕೋಟಿ ಮೊತ್ತದ ವಿವಿಧ ಬ್ಯಾಂಕುಗಳ ಚೆಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.</p>.<p>ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಈತ ಫೊಟೊ ತೆಗೆಸಿಕೊಂಡಿದ್ದ. ತನ್ನ ಹೆಸರು ಹೇಳಿದರೆ ಕ್ಷಣಮಾತ್ರದಲ್ಲಿ ಕೆಲಸಗಳು ನಡೆಯುತ್ತವೆ ಎಂದೂ ಜನರಿಂದ ಹಣ ಪಡೆದು ವಂಚಿಸುತ್ತಿದ್ದ.</p>.<p>‘ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ₹1 ಕೋಟಿ ಹಣ ಪಡೆದಿದ್ದ. ಆದರೆ, ಯಾವುದೇ ಹುದ್ದೆ ಕೊಡಿಸದೆ ವಂಚಿಸಿದ್ದಾನೆ. ನಿಗಮಕ್ಕೆ ಬೇರೆಯವರು ಅಧ್ಯಕ್ಷರಾದ ಬಳಿಕ ಈತನ ವಂಚನೆ ತಿಳಿಯಿತು’ ಎಂದು ಆರೋಪಿಸಿ ಉದ್ಯಮಿ ಸಿಸಿಬಿಗೆ ದೂರು ನೀಡಿದ್ದರು.</p>.<p>‘ಈತ ಹಲವರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಆರೋಪಿ ವಿರುದ್ಧ ದಾಖಲಾಗಿದ್ದ ದೂರಿನನ್ವಯ ನ್ಯಾಯಾಲಯದಿಂದ ವಾರೆಂಟ್ ಪಡೆದು, ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.</p>.<p class="Subhead"><strong>ಚಾಲಕ ಹೆಸರಿನಲ್ಲಿ ಖಾತೆ?:</strong> ಆರೋಪಿ ತನ್ನಕಾರು ಚಾಲಕ ಉಮೇಶ್ ಹೆಸರಿನಲ್ಲೂ ಬ್ಯಾಂಕ್ ಖಾತೆ ತೆರೆದಿದ್ದ. ಉಮೇಶ್ಗೆ ತಿಳಿಯದಂತೆ ಚೆಕ್ಗಳ ಮೇಲೆ ಸಹಿ ಪಡೆದುಕೊಂಡು, ಕೋಟ್ಯಂತರ ವಹಿವಾಟು ನಡೆಸುತ್ತಿದ್ದ. ಇದರಿಂದ ಅನುಮಾನಗೊಂಡು ಪ್ರಶ್ನಿಸಿದಾಗ, ಹಲ್ಲೆಗೂ ಮುಂದಾಗಿದ್ದ. ಈ ಸಂಬಂಧ ಚಾಲಕ ಪೊಲೀಸರಿಗೆ ಈ ಹಿಂದೆಯೇ ದೂರು ದಾಖಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬಿಜೆಪಿ ನಾಯಕರು ತನಗೆ ಆಪ್ತರೆಂದು ಹೇಳಿಕೊಂಡು, ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ನಾಗರಬಾವಿಯ ಯುವರಾಜ್ ಎಂಬಾತನ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.</p>.<p>‘ದಾಳಿ ವೇಳೆ ಆರೋಪಿ ಮನೆಯಲ್ಲಿ ಪತ್ತೆಯಾದ ಕೆಲ ದಾಖಲೆಗಳು, ₹26 ಲಕ್ಷ ನಗದು, ಆರೋಪಿ ಹೆಸರು ಉಲ್ಲೇಖಿಸಿರುವ ₹91 ಕೋಟಿ ಮೊತ್ತದ ವಿವಿಧ ಬ್ಯಾಂಕುಗಳ ಚೆಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.</p>.<p>ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಈತ ಫೊಟೊ ತೆಗೆಸಿಕೊಂಡಿದ್ದ. ತನ್ನ ಹೆಸರು ಹೇಳಿದರೆ ಕ್ಷಣಮಾತ್ರದಲ್ಲಿ ಕೆಲಸಗಳು ನಡೆಯುತ್ತವೆ ಎಂದೂ ಜನರಿಂದ ಹಣ ಪಡೆದು ವಂಚಿಸುತ್ತಿದ್ದ.</p>.<p>‘ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ₹1 ಕೋಟಿ ಹಣ ಪಡೆದಿದ್ದ. ಆದರೆ, ಯಾವುದೇ ಹುದ್ದೆ ಕೊಡಿಸದೆ ವಂಚಿಸಿದ್ದಾನೆ. ನಿಗಮಕ್ಕೆ ಬೇರೆಯವರು ಅಧ್ಯಕ್ಷರಾದ ಬಳಿಕ ಈತನ ವಂಚನೆ ತಿಳಿಯಿತು’ ಎಂದು ಆರೋಪಿಸಿ ಉದ್ಯಮಿ ಸಿಸಿಬಿಗೆ ದೂರು ನೀಡಿದ್ದರು.</p>.<p>‘ಈತ ಹಲವರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಆರೋಪಿ ವಿರುದ್ಧ ದಾಖಲಾಗಿದ್ದ ದೂರಿನನ್ವಯ ನ್ಯಾಯಾಲಯದಿಂದ ವಾರೆಂಟ್ ಪಡೆದು, ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.</p>.<p class="Subhead"><strong>ಚಾಲಕ ಹೆಸರಿನಲ್ಲಿ ಖಾತೆ?:</strong> ಆರೋಪಿ ತನ್ನಕಾರು ಚಾಲಕ ಉಮೇಶ್ ಹೆಸರಿನಲ್ಲೂ ಬ್ಯಾಂಕ್ ಖಾತೆ ತೆರೆದಿದ್ದ. ಉಮೇಶ್ಗೆ ತಿಳಿಯದಂತೆ ಚೆಕ್ಗಳ ಮೇಲೆ ಸಹಿ ಪಡೆದುಕೊಂಡು, ಕೋಟ್ಯಂತರ ವಹಿವಾಟು ನಡೆಸುತ್ತಿದ್ದ. ಇದರಿಂದ ಅನುಮಾನಗೊಂಡು ಪ್ರಶ್ನಿಸಿದಾಗ, ಹಲ್ಲೆಗೂ ಮುಂದಾಗಿದ್ದ. ಈ ಸಂಬಂಧ ಚಾಲಕ ಪೊಲೀಸರಿಗೆ ಈ ಹಿಂದೆಯೇ ದೂರು ದಾಖಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>