<p>ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್) ಸೇರಿದ್ದ ಕೇಬಲ್ಗಳನ್ನು ಹಾನಿ ಮಾಡಲಾಗಿದೆ ಎಂದು ಆರೋಪಿಸಿ ಬಿಎಂಆರ್ಸಿಎಲ್ (ಮೆಟ್ರೊ), ಅಫ್ಕಾನ್ಸ್ ಹಾಗೂ ಚಾಮುಂಡೇಶ್ವರಿ ಎಂಟರ್ಪ್ರೈಸಸ್ ವಿರುದ್ಧಪೊಲೀಸರಿಗೆ ಕೆಪಿಟಿಸಿಎಲ್ ದೂರು ನೀಡಿದೆ.</p>.<p>‘ಬಿಎಂಆರ್ಸಿಎಲ್ ಸಂಸ್ಥೆಯು 11 ಕೆ.ವಿ ಸಾಮರ್ಥ್ಯದ ಕೇಬಲ್ ಅಳವಡಿಸಲು ನಿರ್ಮಾಣ ಸಂಸ್ಥೆಯಾಗಿರುವಅಫ್ಕಾನ್ಸ್ ಹಾಗೂಚಾಮುಂಡೇಶ್ವರಿ ಎಂಟರ್ಪ್ರೈಸಸ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿತ್ತು. ನಿಮ್ಹಾನ್ಸ್ ಮುಖ್ಯದ್ವಾರದ ಬಳಿ ತಮ್ಮ ಕೇಬಲ್ ಅಳವಡಿಸುವ ವೇಳೆಕೆಪಿಟಿಸಿಎಲ್ಗೆ ಸೇರಿರುವ220 ಕೆ.ವಿ.ಸಾಮರ್ಥ್ಯದ ಕೇಬಲ್ಗಳಿಗೆ ಹಾನಿ ಮಾಡಿದ್ದಾರೆ. ಫೆ.16ರಂದು ಪರಿಶೀಲನೆ ವೇಳೆ ಈ ವಿಚಾರ ತಿಳಿಯಿತು. ಸಂಸ್ಥೆಗೆ ಅಂದಾಜು ₹1.4 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ಕೆಪಿಟಿಸಿಎಲ್ನ ಕಿರಿಯ ಎಂಜಿನಿಯರ್ ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>220 ಕೆ.ವಿ.ಸಾಮರ್ಥ್ಯದ ಒಂದು ಮೀಟರ್ ಕೇಬಲ್ನ ಬೆಲೆ ಅಂದಾಜು ₹23,493. ಹಾನಿಯಾಗಿರುವ ಸ್ಥಳದಲ್ಲಿ ಸುಮಾರು 60 ಮೀಟರ್ಗಳಷ್ಟು ಕೇಬಲ್ ದುರಸ್ತಿ ಮಾಡಬೇಕಿದೆ. ಜಾಯಿಂಟ್ ಕಿಟ್ ಕೇಬಲ್ಗೆ ₹8.14 ಲಕ್ಷ ಹಾಗೂ ಅಳವಡಿಕೆಗೆ ₹57 ಲಕ್ಷ ಹಾಗೂ ಉಳಿದ ಖರ್ಚು ₹11 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿದ್ದಾಪುರ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ.</p>.<p>‘ದೂರು ಸಂಬಂಧ ಎನ್ಸಿಆರ್ (ಗಂಭೀರವಲ್ಲದ ಅಪರಾಧ) ದಾಖಲಿಸಿಕೊಳ್ಳಲಾಗಿದೆ. ಕೋರ್ಟ್ನಿಂದ ಅನುಮತಿ ಪಡೆದ ನಂತರ ಎಫ್ಐಆರ್ ದಾಖಲಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್) ಸೇರಿದ್ದ ಕೇಬಲ್ಗಳನ್ನು ಹಾನಿ ಮಾಡಲಾಗಿದೆ ಎಂದು ಆರೋಪಿಸಿ ಬಿಎಂಆರ್ಸಿಎಲ್ (ಮೆಟ್ರೊ), ಅಫ್ಕಾನ್ಸ್ ಹಾಗೂ ಚಾಮುಂಡೇಶ್ವರಿ ಎಂಟರ್ಪ್ರೈಸಸ್ ವಿರುದ್ಧಪೊಲೀಸರಿಗೆ ಕೆಪಿಟಿಸಿಎಲ್ ದೂರು ನೀಡಿದೆ.</p>.<p>‘ಬಿಎಂಆರ್ಸಿಎಲ್ ಸಂಸ್ಥೆಯು 11 ಕೆ.ವಿ ಸಾಮರ್ಥ್ಯದ ಕೇಬಲ್ ಅಳವಡಿಸಲು ನಿರ್ಮಾಣ ಸಂಸ್ಥೆಯಾಗಿರುವಅಫ್ಕಾನ್ಸ್ ಹಾಗೂಚಾಮುಂಡೇಶ್ವರಿ ಎಂಟರ್ಪ್ರೈಸಸ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿತ್ತು. ನಿಮ್ಹಾನ್ಸ್ ಮುಖ್ಯದ್ವಾರದ ಬಳಿ ತಮ್ಮ ಕೇಬಲ್ ಅಳವಡಿಸುವ ವೇಳೆಕೆಪಿಟಿಸಿಎಲ್ಗೆ ಸೇರಿರುವ220 ಕೆ.ವಿ.ಸಾಮರ್ಥ್ಯದ ಕೇಬಲ್ಗಳಿಗೆ ಹಾನಿ ಮಾಡಿದ್ದಾರೆ. ಫೆ.16ರಂದು ಪರಿಶೀಲನೆ ವೇಳೆ ಈ ವಿಚಾರ ತಿಳಿಯಿತು. ಸಂಸ್ಥೆಗೆ ಅಂದಾಜು ₹1.4 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ಕೆಪಿಟಿಸಿಎಲ್ನ ಕಿರಿಯ ಎಂಜಿನಿಯರ್ ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.</p>.<p>220 ಕೆ.ವಿ.ಸಾಮರ್ಥ್ಯದ ಒಂದು ಮೀಟರ್ ಕೇಬಲ್ನ ಬೆಲೆ ಅಂದಾಜು ₹23,493. ಹಾನಿಯಾಗಿರುವ ಸ್ಥಳದಲ್ಲಿ ಸುಮಾರು 60 ಮೀಟರ್ಗಳಷ್ಟು ಕೇಬಲ್ ದುರಸ್ತಿ ಮಾಡಬೇಕಿದೆ. ಜಾಯಿಂಟ್ ಕಿಟ್ ಕೇಬಲ್ಗೆ ₹8.14 ಲಕ್ಷ ಹಾಗೂ ಅಳವಡಿಕೆಗೆ ₹57 ಲಕ್ಷ ಹಾಗೂ ಉಳಿದ ಖರ್ಚು ₹11 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿದ್ದಾಪುರ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ.</p>.<p>‘ದೂರು ಸಂಬಂಧ ಎನ್ಸಿಆರ್ (ಗಂಭೀರವಲ್ಲದ ಅಪರಾಧ) ದಾಖಲಿಸಿಕೊಳ್ಳಲಾಗಿದೆ. ಕೋರ್ಟ್ನಿಂದ ಅನುಮತಿ ಪಡೆದ ನಂತರ ಎಫ್ಐಆರ್ ದಾಖಲಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>