ತೆರಿಗೆ ವಿನಾಯಿತಿ ವಂಚನೆ: ‘ಸೇನಾಧಿಕಾರಿಗಳಿಗೆ ವಸ್ತುಗಳ ಖರೀದಿ ಮೇಲೆ ತೆರಿಗೆ ವಿನಾಯಿತಿ ಇರುವುದನ್ನು ಆರೋಪಿ ತಿಳಿದುಕೊಂಡಿದ್ದ. ಸುಬ್ರಹ್ಮಣ್ಯನಗರ ನಿವಾಸಿಯೊಬ್ಬರನ್ನು ಸಂಪರ್ಕಿಸಿದ್ದ ಆತ, ‘ನನಗೆ ತೆರಿಗೆ ವಿನಾಯಿತಿ ಇದೆ. ಮೊಬೈಲ್, ಕಾರು ತೆರಿಗೆ ರಹಿತವಾಗಿ ಸಿಗುತ್ತವೆ. ನಿಮಗೆ ಬೇಕಾದರೆ ಹೇಳಿ ಕೊಡಿಸುತ್ತೇನೆ. ನನಗೆ ಕಮಿಷನ್ ಕೊಟ್ಟರೆ ಸಾಕು’ ಎಂದಿದ್ದ. ಅದನ್ನು ನಂಬಿದ್ದ ನಿವಾಸಿ ಹಾಗೂ ಅವರ ಪರಿಚಯಸ್ಥರು, ಕಾರು ಹಾಗೂ ಇತರೆ ವಸ್ತುಗಳ ಖರೀದಿಸಲೆಂದು ಲಕ್ಷಾಂತರ ರೂಪಾಯಿ ಕೊಟ್ಟಿದ್ದರು.’