ಅಭಿಯಾನದ ಸಂಯೋಜಕ ಡಾ.ಇಮ್ತಿಯಾಜ್ ಪರ್ವೇಜ್ ಮಾತನಾಡಿ, ‘ಜುಲೈನಲ್ಲಿ ಆರು ದಿನವೂ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ. ತಜ್ಞರ ಮಾತು, ಸಂವಾದ, ನವೋದ್ಯಮಿಗಳ ಜತೆಗೆ ಒಪ್ಪಂದಕ್ಕೆ ಸಹಿ, ರೋಡ್ಶೋ, ಸಂಸ್ಥೆಯ ಲ್ಯಾಬ್ಗಳಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.