<p><strong>ಬೆಂಗಳೂರು</strong>: ಸೈಬರ್ ಭದ್ರತೆಯಲ್ಲಿ ತಂತ್ರಜ್ಞಾನ ಬಲವರ್ಧನೆ, ಇದಕ್ಕೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಗಳೂರಿನ ಐಐಎಸ್ಸಿಯಲ್ಲಿನ ಫೌಂಡೇಷನ್ ಫಾರ್ ಸೈನ್ಸ್, ಇನ್ನೋವೇಶನ್ ಮತ್ತು ಡೆವಲಪ್ಮೆಂಟ್ (ಎಫ್ಎಸ್ಐಡಿ), ಮೈಸೂರು ರಾಜಮನೆತನದ ಸೈಬರ್ವರ್ಸ್ ಫೌಂಡೇಷನ್ ಮತ್ತು ಪ್ಯಾಂಥರ್ಯುನ್ ಜತೆ ಈಚೆಗೆ ಒಪ್ಪಂದ ಮಾಡಿಕೊಂಡಿದೆ. </p>.<p>ಸೈಬರ್ವರ್ಸ್ ಫೌಂಡೇಷನ್ನ ಅಧ್ಯಕ್ಷೆ ತ್ರಿಶಿಖಾ ಕುಮಾರಿ, ಎಫ್ಎಸ್ಐಡಿ ಮುಖ್ಯ ಕಾರ್ಯನಿರ್ವಾಹಕ ಬಿ. ಗುರುಮೂರ್ತಿ ಮತ್ತು ಪ್ಯಾಂಥರ್ಯುನ್ನ ಸ್ಥಾಪಕ ಮತ್ತು ಸಿಇಒ ಶ್ರೀನಿವಾಸ್ ಲಕ್ಷ್ಮಣ್ ಶೇಖರ್ ಅವರು ಸೈಬರ್ವರ್ಸ್ ಫೌಂಡೇಷನ್ನ ಸಲಹಾ ಮಂಡಳಿಯ ಅಧ್ಯಕ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. </p>.<p>ಒಪ್ಪಂದದ ಭಾಗವಾಗಿ, ಮೂರೂ ಸಂಸ್ಥೆಗಳು ಜಂಟಿಯಾಗಿ ಸೈಬರ್ ಭದ್ರತಾ ಸ್ಟಾರ್ಟ್ಅಪ್ಗಳನ್ನು ಗುರುತಿಸಿ, ಪೋಷಿಸುತ್ತವೆ. ಆಯ್ದ ಸ್ಟಾರ್ಟ್ಅಪ್ಗಳಿಗೆ ತಾಂತ್ರಿಕ, ನಿರ್ವಹಣೆ, ಮಾರುಕಟ್ಟೆ ಪ್ರವೇಶ ಇತ್ಯಾದಿಗೆ ಅಗತ್ಯವಿರುವ ಸಹಾಯ ಮಾಡಲಾಗುತ್ತದೆ. </p>.<p>‘ಈ ಒಪ್ಪಂದವು ಭಾರತದ ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸೈಬರ್ ಭದ್ರತೆಯು ದೇಶಕ್ಕೆ ಇಂದಿನ ಅಗತ್ಯ ತಂತ್ರಜ್ಞಾನವಾಗಿದೆ’ ಎಂದು ಎಫ್ಎಸ್ಐಡಿ ನಿರ್ದೇಶಕ ಗುರುಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸೈಬರ್ ಭದ್ರತೆಯಲ್ಲಿ ತಂತ್ರಜ್ಞಾನ ಬಲವರ್ಧನೆ, ಇದಕ್ಕೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೆಂಗಳೂರಿನ ಐಐಎಸ್ಸಿಯಲ್ಲಿನ ಫೌಂಡೇಷನ್ ಫಾರ್ ಸೈನ್ಸ್, ಇನ್ನೋವೇಶನ್ ಮತ್ತು ಡೆವಲಪ್ಮೆಂಟ್ (ಎಫ್ಎಸ್ಐಡಿ), ಮೈಸೂರು ರಾಜಮನೆತನದ ಸೈಬರ್ವರ್ಸ್ ಫೌಂಡೇಷನ್ ಮತ್ತು ಪ್ಯಾಂಥರ್ಯುನ್ ಜತೆ ಈಚೆಗೆ ಒಪ್ಪಂದ ಮಾಡಿಕೊಂಡಿದೆ. </p>.<p>ಸೈಬರ್ವರ್ಸ್ ಫೌಂಡೇಷನ್ನ ಅಧ್ಯಕ್ಷೆ ತ್ರಿಶಿಖಾ ಕುಮಾರಿ, ಎಫ್ಎಸ್ಐಡಿ ಮುಖ್ಯ ಕಾರ್ಯನಿರ್ವಾಹಕ ಬಿ. ಗುರುಮೂರ್ತಿ ಮತ್ತು ಪ್ಯಾಂಥರ್ಯುನ್ನ ಸ್ಥಾಪಕ ಮತ್ತು ಸಿಇಒ ಶ್ರೀನಿವಾಸ್ ಲಕ್ಷ್ಮಣ್ ಶೇಖರ್ ಅವರು ಸೈಬರ್ವರ್ಸ್ ಫೌಂಡೇಷನ್ನ ಸಲಹಾ ಮಂಡಳಿಯ ಅಧ್ಯಕ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. </p>.<p>ಒಪ್ಪಂದದ ಭಾಗವಾಗಿ, ಮೂರೂ ಸಂಸ್ಥೆಗಳು ಜಂಟಿಯಾಗಿ ಸೈಬರ್ ಭದ್ರತಾ ಸ್ಟಾರ್ಟ್ಅಪ್ಗಳನ್ನು ಗುರುತಿಸಿ, ಪೋಷಿಸುತ್ತವೆ. ಆಯ್ದ ಸ್ಟಾರ್ಟ್ಅಪ್ಗಳಿಗೆ ತಾಂತ್ರಿಕ, ನಿರ್ವಹಣೆ, ಮಾರುಕಟ್ಟೆ ಪ್ರವೇಶ ಇತ್ಯಾದಿಗೆ ಅಗತ್ಯವಿರುವ ಸಹಾಯ ಮಾಡಲಾಗುತ್ತದೆ. </p>.<p>‘ಈ ಒಪ್ಪಂದವು ಭಾರತದ ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸೈಬರ್ ಭದ್ರತೆಯು ದೇಶಕ್ಕೆ ಇಂದಿನ ಅಗತ್ಯ ತಂತ್ರಜ್ಞಾನವಾಗಿದೆ’ ಎಂದು ಎಫ್ಎಸ್ಐಡಿ ನಿರ್ದೇಶಕ ಗುರುಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>