ದಾಬಸ್ಪೇಟೆ: ಗಂಗರ ರಾಜಧಾನಿಯಾಗಿದ್ದ ಮಣ್ಣೆ ಗ್ರಾಮದಲ್ಲಿ ಶನಿವಾರ ‘ಪರಂಪರಾ ನಡಿಗೆ’ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಈ ನಡಿಗೆ ಸೋಮೇಶ್ವರ ದೇವಾಲಯದಿಂದ, ಕಪಿಲೇಶ್ವರ ದೇವಾಲಯ, ಸಪ್ತ ಮಾತೃಕೆಯರ ವಿಗ್ರಹವಿರುವ ಸ್ಥಳ, ಅಣ್ಣತಂಗಿಯರ ಗುಡಿ, ವಿಜಯ ಜಿನಾಲಯ ಮಾರ್ಗವಾಗಿ ಮಣ್ಣೆ ಸರ್ಕಾರಿ ಪ್ರೌಢಶಾಲೆಯವರೆಗೆ ಸಾಗಿತು.