‘ಶ್ರೀನಿವಾಸ್ ಪ್ರಸಾದ್ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದೆವು. ಆದರೆ ಅವರು ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ಬಿಜೆಪಿ ಸೇರಿಬಿಟ್ಟರು. ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಅವರಿಗೆ ತಲೆ ಇಲ್ವಾ. ಬಿಜೆಪಿಯಲ್ಲಿದ್ದುಕೊಂಡು ಅವರು ಅಧಿಕಾರ ಅನುಭವಿಸಬಹುದಷ್ಟೇ. ಅಲ್ಲಿದ್ದು ಏನೂ ಸಾಧನೆ ಮಾಡಲು ಆಗುವುದಿಲ್ಲ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿ, ಸಹಿಸಿಕೊಂಡು ಸುಮ್ಮನಿರುವುದು ಮುಟ್ಠಾಳತನ. ದಲಿತ ನಾಯಕರೆನಿಸಿಕೊಂಡವರು ಮೊದಲು ಬಿಜೆಪಿಯಿಂದ ಹೊರಬರಬೇಕು’ ಎಂದೂ ಒತ್ತಾಯಿಸಿದರು.