<p><strong>ಬೆಂಗಳೂರು</strong>: ‘ಚಿತ್ರನಟ ದರ್ಶನ್ ಸ್ವಲ್ಪ ಮುಂಗೋಪಿ, ಆತನಿಗೆ ಸಿಟ್ಟು ಜಾಸ್ತಿ. ಆದರೆ, ಕೊಲೆ ಮಾಡುವಷ್ಟು ಕಟುಕನಲ್ಲ’ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗೌಡ ಹೇಳಿದರು.</p>.<p>ದರ್ಶನ್ ವಿರುದ್ಧದ ಆರೋಪ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ದರ್ಶನ್ ಹಲವು ವರ್ಷಗಳಿಂದ ನನಗೆ ಸ್ನೇಹಿತ. ಕೊಲೆ ಮಾಡುವಂತಹ ಬುದ್ಧಿ ಆತನಿಗೆ ಇಲ್ಲ. ಈ ಪ್ರಕರಣದಲ್ಲಿ ಆತನೇ ಕೊಲೆ ಮಾಡಿದ್ದಾನಾ ಎನ್ನುವುದು ಗೊತ್ತಿಲ್ಲ’ ಎಂದರು.</p>.<p>‘ಈ ಪ್ರಕರಣ ಏಕೆ ನಡೆದಿದೆ? ಹೇಗೆ ನಡೆದಿದೆ ಎನ್ನುವ ಮಾಹಿತಿಯೂ ನನಗಿಲ್ಲ. ಬೇರೆಯವರು ಕೊಲೆ ಮಾಡಿ ದರ್ಶನ್ ಹೆಸರು ಹೇಳಿರಬಹುದಾ ಎಂಬುದೂ ಗೊತ್ತಿಲ್ಲ. ಪ್ರಕರಣದ ತನಿಖೆ ನಡೆಯತ್ತಿದೆ. ಸತ್ಯ ಇನ್ನಷ್ಟೇ ಹೊರಬರಬೇಕಿದೆ’ ಎಂದು ಹೇಳಿದರು.</p>.<p>‘ಮುಂಗೋಪಿ ಆಗಿರುವುದರಿಂದ ಅಭಿಮಾನಿಗಳಿಗೆ ದರ್ಶನ್ ಗದರುತ್ತಿದ್ದ. ಸಿಟ್ಟಿನಿಂದ ಮಾತನಾಡುತ್ತಿದ್ದ. ಇನ್ನೇನು ಕೆಲವು ದಿನಗಳಲ್ಲಿ ಈ ಪ್ರಕರಣದ ಸತ್ಯಾಂಶ ಹೊರ ಬರಲಿದೆ’ ಎಂದರು.</p>.<p>ತಮ್ಮ ಅಂಗರಕ್ಷಕನ ಮೇಲೆ ದರ್ಶನ್ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಉದಯ್ ಗೌಡ, ‘ಅದೆಲ್ಲ ಸುಳ್ಳು. ಅಂತಹ ಘಟನೆಯೇ ನಡೆದಿಲ್ಲ. ನಿಮಗೆ ಈ ರೀತಿ ಹೇಳಿದವರು ಯಾರು’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಚಿತ್ರನಟ ದರ್ಶನ್ ಸ್ವಲ್ಪ ಮುಂಗೋಪಿ, ಆತನಿಗೆ ಸಿಟ್ಟು ಜಾಸ್ತಿ. ಆದರೆ, ಕೊಲೆ ಮಾಡುವಷ್ಟು ಕಟುಕನಲ್ಲ’ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗೌಡ ಹೇಳಿದರು.</p>.<p>ದರ್ಶನ್ ವಿರುದ್ಧದ ಆರೋಪ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ದರ್ಶನ್ ಹಲವು ವರ್ಷಗಳಿಂದ ನನಗೆ ಸ್ನೇಹಿತ. ಕೊಲೆ ಮಾಡುವಂತಹ ಬುದ್ಧಿ ಆತನಿಗೆ ಇಲ್ಲ. ಈ ಪ್ರಕರಣದಲ್ಲಿ ಆತನೇ ಕೊಲೆ ಮಾಡಿದ್ದಾನಾ ಎನ್ನುವುದು ಗೊತ್ತಿಲ್ಲ’ ಎಂದರು.</p>.<p>‘ಈ ಪ್ರಕರಣ ಏಕೆ ನಡೆದಿದೆ? ಹೇಗೆ ನಡೆದಿದೆ ಎನ್ನುವ ಮಾಹಿತಿಯೂ ನನಗಿಲ್ಲ. ಬೇರೆಯವರು ಕೊಲೆ ಮಾಡಿ ದರ್ಶನ್ ಹೆಸರು ಹೇಳಿರಬಹುದಾ ಎಂಬುದೂ ಗೊತ್ತಿಲ್ಲ. ಪ್ರಕರಣದ ತನಿಖೆ ನಡೆಯತ್ತಿದೆ. ಸತ್ಯ ಇನ್ನಷ್ಟೇ ಹೊರಬರಬೇಕಿದೆ’ ಎಂದು ಹೇಳಿದರು.</p>.<p>‘ಮುಂಗೋಪಿ ಆಗಿರುವುದರಿಂದ ಅಭಿಮಾನಿಗಳಿಗೆ ದರ್ಶನ್ ಗದರುತ್ತಿದ್ದ. ಸಿಟ್ಟಿನಿಂದ ಮಾತನಾಡುತ್ತಿದ್ದ. ಇನ್ನೇನು ಕೆಲವು ದಿನಗಳಲ್ಲಿ ಈ ಪ್ರಕರಣದ ಸತ್ಯಾಂಶ ಹೊರ ಬರಲಿದೆ’ ಎಂದರು.</p>.<p>ತಮ್ಮ ಅಂಗರಕ್ಷಕನ ಮೇಲೆ ದರ್ಶನ್ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಉದಯ್ ಗೌಡ, ‘ಅದೆಲ್ಲ ಸುಳ್ಳು. ಅಂತಹ ಘಟನೆಯೇ ನಡೆದಿಲ್ಲ. ನಿಮಗೆ ಈ ರೀತಿ ಹೇಳಿದವರು ಯಾರು’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>