‘ಹೊಸಪೇಟೆ, ಚಿತ್ರದುರ್ಗ, ಬಳ್ಳಾರಿ ಭಾಗಗಳಿಂದ ಬರುವ ರೈತರಿಗೆ ದಾಸನಪುರ ಎಪಿಎಂಸಿಯಿಂದ ಹೆಚ್ಚು ಅನುಕೂಲವಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಲಾರಿಯಿಂದ ತರುವ ರೈತರು ದಿನಗಟ್ಟಲೇ ಕಾಯಬೇಕಿಲ್ಲ. ಒಂದು ದಿನದೊಳಗೆ ತಾವು ತಂದ ಪದಾರ್ಥವನ್ನು ರೈತರು ವರ್ತಕರಿಗೆ ಕೊಟ್ಟು ವಾಪಸ್ಸು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ’ ಎಂದು ವರ್ತಕರಾದ ಮಹೇಶ್ ತಿಳಿಸಿದರು.