ನಗರದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದ ಇಲ್ಲಿನ ಸಾಗರ್ ಅಪೋಲೊ ಆಸ್ಪತ್ರೆ ಬಳಿ ಮರ ಉರುಳಿ, ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆಸ್ಪತ್ರೆಯೊಂದರಲ್ಲಿ ಡಿ ಗ್ರೂಪ್ ನೌಕರರಾಗಿದ್ದ ವೆಂಕಟೇಶ್ (41) ಎಂಬುವರು ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದರು.ಕತ್ತಲಿನಲ್ಲಿ ಸಾಗುವಾಗ ತುಂಡಾಗಿದ್ದತಂತಿಯನ್ನು ವೆಂಕಟೇಶ್ ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.