‘ಜ.3ರಂದು ಸರ್ಕಾರಿ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದೆ. ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಹಿಂಬದಿಯಿಂದ ಬಂದ್ ಬೈಕ್, ಕಾರಿಗೆ ಡಿಕ್ಕಿಯಾಗಿತ್ತು. ನಂತರ ಕಾರು ನಿಲ್ಲಿಸಿ ಚಾಲಕ ಸವಾರನನ್ನು ಪ್ರಶ್ನಿಸುತ್ತಿದ್ದರು. ಕಾರು ಚಾಲಕನಿಗೆ ಆರೋಪಿ ನಿಂದಿಸಿದ. ಅದನ್ನು ಕಂಡು ಕಾರಿನಿಂದ ಇಳಿದು ಪ್ರಶ್ನಿಸಿದ್ದಕ್ಕೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಬೈಕ್ ಸವಾರನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿ ಶೋಭಾರಾಣಿ ದೂರು ನೀಡಿದ್ದಾರೆ.