<p><strong>ಬೆಂಗಳೂರು:</strong> ನಗರದಲ್ಲಿ ಸಂಭವಿಸಿದ ಅಪಘಾತಗಳ ಅಂಕಿಅಂಶಗಳ ಪಟ್ಟಿಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಬಿಡುಗಡೆ ಮಾಡಿದ್ದಾರೆ.</p>.<p>2023ಕ್ಕೆ ಹೋಲಿಸಿದರೆ 2024ರಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ಒಟ್ಟಾರೆ ಶೇ 3.97ರಷ್ಟು ಇಳಿಕೆಯಾಗಿದೆ.</p>.<p>ಗಂಭೀರ ಅಪಘಾತಗಳ ಪ್ರಮಾಣವು ಶೇ 1.26ರಷ್ಟು ಇಳಿಕೆ ಕಂಡಿದೆ. ಈ ಅಪಘಾತಗಳಿಂದ ಉಂಟಾಗುವ ಸಾವುಗಳ ಪ್ರಮಾಣ ಶೇ 1.90ರಷ್ಟು ಇಳಿಕೆಯಾಗಿದೆ. ಗಂಭೀರವಲ್ಲದ ಅಪಘಾತಗಳ ಪ್ರಮಾಣವು ಶೇ 4.57ರಷ್ಟು ಇಳಿಕೆ ಕಂಡಿದೆ.</p>.<p>2024ರಲ್ಲಿ ಸ್ವಯಂ ಅಪಘಾತಗಳ ಸಂಖ್ಯೆಯು ಶೇ 3.34ರಷ್ಟು ಆಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಅಲ್ಪಪ್ರಮಾಣದಲ್ಲಿ ಏರಿಕೆ ಆಗಿರುವುದು ಕಂಡು ಬಂದಿದೆ.</p>.<p>ನಗರದಲ್ಲಿ ಪಾದಚಾರಿ ಅಪಘಾತಗಳನ್ನು ತಡೆಗಟ್ಟಲು ಅಪಘಾತ ಕಪ್ಪು ಚುಕ್ಕೆಗಳನ್ನು ಗುರುತಿಸಲು ಹಾಗೂ ದುರಸ್ತಿ ಪಡಿಸಲು ಹಲವು ಕ್ರಮ ಕೈಗೊಳ್ಳಲಾಗಿತ್ತು. ಇದರ ಫಲವಾಗಿ ಕಳೆದ ವರ್ಷ ಪಾದಚಾರಿಗಳ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2023ಕ್ಕೆ ಹೋಲಿಸಿದರೆ ಕಳೆದ ವರ್ಷ ಶೇ 23.17ರಷ್ಟು ಕಡಿಮೆಯಾಗಿದೆ.</p>.<p>ರಸ್ತೆ ಸುರಕ್ಷತೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಳೆದ ವರ್ಷ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ತನ್ನ ಎಲ್ಲ ಪಾಲುದಾರರ ಜತೆಗೆ ನಡೆಸಿದ ಪ್ರಯತ್ನವು ಫಲ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸಂಚಾರ ನಿಯಮ ಉಲ್ಲಂಘಿಸಿದವರಿಂದ ಕಳೆದ ವರ್ಷ ₹80.90 ಕೋಟಿ ದಂಡ ಸಂಗ್ರಹಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಸಂಭವಿಸಿದ ಅಪಘಾತಗಳ ಅಂಕಿಅಂಶಗಳ ಪಟ್ಟಿಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಬಿಡುಗಡೆ ಮಾಡಿದ್ದಾರೆ.</p>.<p>2023ಕ್ಕೆ ಹೋಲಿಸಿದರೆ 2024ರಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ಒಟ್ಟಾರೆ ಶೇ 3.97ರಷ್ಟು ಇಳಿಕೆಯಾಗಿದೆ.</p>.<p>ಗಂಭೀರ ಅಪಘಾತಗಳ ಪ್ರಮಾಣವು ಶೇ 1.26ರಷ್ಟು ಇಳಿಕೆ ಕಂಡಿದೆ. ಈ ಅಪಘಾತಗಳಿಂದ ಉಂಟಾಗುವ ಸಾವುಗಳ ಪ್ರಮಾಣ ಶೇ 1.90ರಷ್ಟು ಇಳಿಕೆಯಾಗಿದೆ. ಗಂಭೀರವಲ್ಲದ ಅಪಘಾತಗಳ ಪ್ರಮಾಣವು ಶೇ 4.57ರಷ್ಟು ಇಳಿಕೆ ಕಂಡಿದೆ.</p>.<p>2024ರಲ್ಲಿ ಸ್ವಯಂ ಅಪಘಾತಗಳ ಸಂಖ್ಯೆಯು ಶೇ 3.34ರಷ್ಟು ಆಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಅಲ್ಪಪ್ರಮಾಣದಲ್ಲಿ ಏರಿಕೆ ಆಗಿರುವುದು ಕಂಡು ಬಂದಿದೆ.</p>.<p>ನಗರದಲ್ಲಿ ಪಾದಚಾರಿ ಅಪಘಾತಗಳನ್ನು ತಡೆಗಟ್ಟಲು ಅಪಘಾತ ಕಪ್ಪು ಚುಕ್ಕೆಗಳನ್ನು ಗುರುತಿಸಲು ಹಾಗೂ ದುರಸ್ತಿ ಪಡಿಸಲು ಹಲವು ಕ್ರಮ ಕೈಗೊಳ್ಳಲಾಗಿತ್ತು. ಇದರ ಫಲವಾಗಿ ಕಳೆದ ವರ್ಷ ಪಾದಚಾರಿಗಳ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 2023ಕ್ಕೆ ಹೋಲಿಸಿದರೆ ಕಳೆದ ವರ್ಷ ಶೇ 23.17ರಷ್ಟು ಕಡಿಮೆಯಾಗಿದೆ.</p>.<p>ರಸ್ತೆ ಸುರಕ್ಷತೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಳೆದ ವರ್ಷ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ತನ್ನ ಎಲ್ಲ ಪಾಲುದಾರರ ಜತೆಗೆ ನಡೆಸಿದ ಪ್ರಯತ್ನವು ಫಲ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸಂಚಾರ ನಿಯಮ ಉಲ್ಲಂಘಿಸಿದವರಿಂದ ಕಳೆದ ವರ್ಷ ₹80.90 ಕೋಟಿ ದಂಡ ಸಂಗ್ರಹಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>