ಬೆಂಗಳೂರು: 1995ರ ನೌಕರರ ಪಿಂಚಣಿ ಯೋಜನೆಯಡಿ(ಇಪಿಎಸ್-95) ನೌಕರರ ಪಿಂಚಣಿ ಪರಿಷ್ಕರಣೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅನುಷ್ಠಾನ ವಿಳಂಬ ಮಾಡಿದರೆ ಹೋರಾಟಕ್ಕೆ ಇಳಿಯಲು ಇಪಿಎಸ್–95 (ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ) ನಿವೃತ್ತ ನೌಕರರು ನಿರ್ಧರಿಸಿದರು.
ಲಾಲ್ಬಾಗ್ನಲ್ಲಿ ಭಾನುವಾರ ಸಭೆ ನಡೆಸಿದ ನಿವೃತ್ತ ನೌಕರರು, ‘ಸುಪ್ರೀಂ ಕೋರ್ಟ್ ತೀರ್ಪು ನೀಡಿ ಒಂದು ತಿಂಗಳಾದರೂ ಪಿಂಚಣಿ ಪರಿಷ್ಕರಣೆಗೆ ನೌಕರರ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್ಒ) ಯಾವುದೇ ಕ್ರಮ ಕೈಗೊಂಡಿಲ್ಲ. ಪಿಂಚಣಿದಾರರಿಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ನೀಡಿರುವ ಎಂಟು ವಾರಗಳ ಗಡುವಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ಹೋರಾಟಕ್ಕೆ ಸಿದ್ಧರಾಗುವುದಾಗಿ ಎಚ್ಚರಿಸಿದರು.
ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದರೇಣು, ಸಂಘದ ಅಧ್ಯಕ್ಷ ಶಂಕರ್ಕುಮಾರ್, ಕಾರ್ಯಾಧ್ಯಕ್ಷ ನಂಜುಂಡೇಗೌಡ, ಉಪಾಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ರಂಗನಾಥ್ ಪಾಲ್ಗೊಂಡಿದ್ದರು.