ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಅವಧಿಯಲ್ಲಿ ಕೆಂಗೇರಿಯನ್ನು ‘ಗೇಟ್ ವೇ ಆಫ್ ಬೆಂಗಳೂರು’ ಎಂದು ನಾಮಕರಣ ಮಾಡುವ ಕನಸು ಹೊಂದಿದ್ದರು. ಐತಿಹಾಸಿಕ ಕೆಂಗೇರಿ ಕರಗ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಓದಿದ ಶಾಲೆ, ಗಾಂಧಿ ಅವರಿಂದ ಶಿಲಾನ್ಯಾಸಗೊಂಡ ಕೆಂಗೇರಿ ಮಾರುಕಟ್ಟೆ ಮೊದಲಾದ ಐತಿಹಾಸಿಕ ಸ್ಥಳವನ್ನು ಹೊಂದಿದ್ದರೂ ಕೆಂಗೇರಿಯು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತನ್ನ ಮೂಲ ಹೆಸರು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.