ಸೋಮಸುಂದರ್ ಬಿ. ಹಾಗೂ ಮಂಜುನಾಥ್ ಡಿ. ಸೇರಿದಂತೆ 30 ಸೂಪರಿಂಟೆಂಡಿಂಗ್ ಎಂಜಿನಿಯರ್
ಗಳಿಗೆ ನಿಯಮ 32ರಡಿ ಬಡ್ತಿ ನೀಡಿ ಸ್ವತಂತ್ರ ಪ್ರಭಾರದಲ್ಲಿರಬಹುದು ಎಂದು ಇಲಾಖಾ ಪದೋನ್ನತಿ ಸಮಿತಿ ಈ ವರ್ಷದ ಆಗಸ್ಟ್ 23ರಂದು ಶಿಫಾರಸು ಮಾಡಿತು. ಸ್ವತಂತ್ರ ಪ್ರಭಾರದಡಿ 17 ಸೂಪರಿಂಟೆಂಡಿಂಗ್ ಎಂಜಿನಿಯರ್ಗಳಿಗೆ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಬಡ್ತಿ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೆಪ್ಟೆಂಬರ್ 18ರಂದು ಆದೇಶ ಹೊರಡಿಸಿತು. ಸೋಮಸುಂದರ್ ಅವರನ್ನು ಹೇಮಾವತಿ ಯೋಜನಾ ವಲಯದ ಮುಖ್ಯ ಎಂಜಿನಿಯರ್, ಡಿ.ಮಂಜುನಾಥ್ ಅವರನ್ನು ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ (ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯ) ಆಗಿ ನೇಮಕ ಮಾಡಲಾಯಿತು.