ಹೊ.ವೆ.ಶೇಷಾದ್ರಿ ಅವರ ‘ಸಮಾಜ ಯೋಗ’ ಪುಸ್ತಕದ ಆಧಾರದಲ್ಲಿ ಮಾತನಾಡಿದ ಅವರು ‘ಅಗತ್ಯಕ್ಕಿಂತಲೂ ಹೆಚ್ಚು ಕೊಂಡುಕೊಳ್ಳುವ ಮನಸ್ಥಿತಿ ನಮ್ಮ ಜನರಲ್ಲಿದೆ. ಕೊಳ್ಳುಬಾಕತನದಿಂದ ಅಶಾಂತಿ ನಿರ್ಮಾಣವಾಗುತ್ತದೆ. ಇದು ಮನುಷ್ಯನನ್ನು ಮಾನಸಿಕ ಅಸಮತೋಲನ ಪರಿಸ್ಥಿತಿಗೆ ದೂಡುತ್ತದೆ.ದೇಹ, ಮನಸ್ಸನ್ನು ಕಟ್ಟುವುದು, ಕುಟುಂಬಗಳ ನಡುವಣ ತಾಕಲಾಟವನ್ನು ಕಡಿಮೆಮಾಡುವುದೇ ಸಮಾಜ ಯೋಗ. ಎಲ್ಲರೂ ಅವರವರ ಕೆಲಸವನ್ನು ಮಾಡುತ್ತಾ, ಮತ್ತೊಬ್ಬರ ಕೆಲಸವನ್ನು ಗೌರವಿಸುತ್ತಾ ಸಾಮರಸ್ಯದಿಂದ ಬದುಕಬೇಕು. ಸಾಮರಸ್ಯದ ಕೊರತೆ ಉಂಟಾದಾಗ ಕುಟುಂಬ ಹಾಗೂ ಸಮಾಜ ವಿಷ ವರ್ತುಲದಲ್ಲಿ ಸಿಲುಕುತ್ತದೆ’ ಎಂದು ತಿಳಿಸಿದರು.