‘ಯಾವುದೇ ವಿಷಯ ತಿಳಿದುಕೊಳ್ಳುವ ಮೊದಲೇ ನಿರ್ಧಾರಕ್ಕೆ ಬರಬಾರದು. ಎಲ್ಲದಕ್ಕೂ ತೀರ್ಮಾನ ನೀಡುವ ಮನಸ್ಸು ಕಲಿಯುವಿಕೆಯ ಮೊದಲ ಶತ್ರು. ನಾವು ಎಷ್ಟು ಕೆಲಸ ಮಾಡಿದರೂ ಇಷ್ಟೇ, ನಾಲ್ಕು ಭ್ರಷ್ಟರನ್ನು ಹಿಡಿದ ಕೂಡಲೇ ಭಷ್ಟಾಚಾರ ನಿಂತು ಹೋಗುತ್ತಾ ಎಂಬ ಸಿನಿಕತನಕ್ಕೂ ಬರಬಾರದು. ಭ್ರಷ್ಟರಿಗೆ ದೊಡ್ಡವರ ಸಂಪರ್ಕ ಇದೆ, ನಾವು ಯಾಕೆ ತೊಂದರೆ ತೆಗೆದುಕೊಳ್ಳಬೇಕು ಎಂಬ ಹೆದರಿಕೆಯೂ ಇರಬಾರದು. ಎಲ್ಲೇ ಭ್ರಷ್ಟತೆ ಕಂಡರೂ ತಡೆಯುವುದೇ ನಮ್ಮ ಕೆಲಸ’ ಎಂದು ಹುರಿದುಂಬಿಸಿದರು.