ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ವಿಭಿನ್ನ ಆಡಳಿತ ನಡೆಸುತ್ತಿದೆ. ಆಮ್ಲಜನಕ ಸಿಗದೆ ಜನರು ಸತ್ತಿರುವುದನ್ನು ಹೈಕೋರ್ಟ್ ಸಮಿತಿ ವರದಿ ಕೊಟ್ಟ ನಂತರ ಒಪ್ಪಿಕೊಂಡ ಸರ್ಕಾರ, ಸತ್ತವರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ಘೋಷಿಸಿತು. ಆದರೆ, ಸಂಸತ್ತಿಗೆ ಮಾತ್ರ ಆಮ್ಲಜನಕ ಸಿಗದೆ ಯಾರೂ ಸತ್ತಿಲ್ಲ ಎಂದು ಮಾಹಿತಿ ನೀಡಿದೆ’ ಎಂದರು.