‘ಕೆಲ ದಿನಗಳ ಹಿಂದೆಯಷ್ಟೇ ಸ್ನೇಹಿತನೊಬ್ಬ ಕೆರೆಯಲ್ಲಿ ಈಜಾಡಿ, ಅದರ ವಿಡಿಯೊ ಮಾಡಿಕೊಂಡಿದ್ದ. ಅದನ್ನೇ ಇನ್ಸ್ಟಾಗ್ರಾಮ್ ಆ್ಯಪ್ನ ರೀಲ್ಸ್ನಲ್ಲಿ ಅಪ್ಲೋಡ್ ಮಾಡಿದ್ದ. ಅದನ್ನು ನೋಡಿದ್ದ ಬಾಲಕರು, ಸ್ನೇಹಿತರ ಜೊತೆ ಸೇರಿ ಕೆರೆಗೆ ಹೋಗಿದ್ದರು. ಬಾಲಕರ ಸಾವಿನ ಬಗ್ಗೆ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೂವರು ಬಾಲಕರಿಗೆ ಈಜಾಡಲು ಬರುತ್ತಿರಲಿಲ್ಲ. ಸ್ನೇಹಿತರೇ ಒತ್ತಾಯದಿಂದ ಅವರನ್ನು ಕೆರೆಗೆ ಕರೆದೊಯ್ದಿದ್ದರು. ಸ್ನೇಹಿತರು, ಪ್ರತ್ಯಕ್ಷದರ್ಶಿಗಳ ಲಿಖಿತ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.