ಬೆಂಗಳೂರು: ಸೋಲದೇವನಹಳ್ಳಿ ಬಳಿಯ ಅಜ್ಜೆಗೌಡಪಾಳ್ಯದಲ್ಲಿ ನಾಯಿಗಳ ಹಾವಳಿಗೆ ಐದು ವರ್ಷದ ಬಾಲಕ ದುರ್ಗೇಶ್ಬಲಿಯಾಗಿದ್ದಾನೆ.ಈತ ಸೇಡಂ ತಾಲ್ಲೂಕಿನ ಮಲ್ಲಪ್ಪ-ಮಲ್ಲಮ್ಮ ದಂಪತಿಯ ಪುತ್ರ.
ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದತಂದೆಯನ್ನು ನೋಡಲು ಮನೆಯಿಂದ ಕಟ್ಟಡದ ಸ್ಥಳಕ್ಕೆ ಹೊರಟಿದ್ದಾಗಲೇ ನಾಯಿಗಳು ದುರ್ಗೇಶ ಮೇಲೆ ದಾಳಿಮಾಡಿವೆ. ತೀವ್ರ ಗಾಯಗೊಂಡ ದುರ್ಗೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.