<p><strong>ಬೆಂಗಳೂರು:</strong> ಕೋವಿಡ್ನಿಂದಾಗಿ ವಿವಿಧ ವರ್ಗದವರು ಎದುರಿಸಿದ ಸಂಕಷ್ಟಗಳು ಸೇರಿದಂತೆ ರೋಗ ತಂದ ಬದಲಾವಣೆಗಳ ಬಗ್ಗೆ ಶಿವಮೊಗ್ಗದ ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘವು ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆ ಆಯೋಜಿಸಿದೆ.</p>.<p>ಕೋವಿಡ್ ಸಂದರ್ಭದಲ್ಲಿನ ಸಾವು–ನೋವು, ಸಂಘರ್ಷ, ಸಾಮರಸ್ಯ, ಪ್ರೀತಿ–ಪ್ರೇಮ, ಕೌಟುಂಬಿಕ ದೌರ್ಜನ್ಯ, ರಾಜಕೀಯ ಬೆಳವಣಿಗೆ, ಭ್ರಷ್ಟಾಚಾರ, ಕಾರ್ಮಿಕರ ವಲಸೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸ್ವತಂತ್ರ ನಾಟಕವನ್ನು ರಚಿಸಬೇಕು. ರಂಗ ಪ್ರಯೋಗದ ಅವಧಿ 1 ಗಂಟೆ 15 ನಿಮಿಷಗಳಿಂದ 1 ಗಂಟೆ 30 ನಿಮಿಷಗಳ ಕಾಲಮಿತಿ ಹೊಂದುವಂತೆ ಇರಬೇಕು. 6 ಸಾವಿರದಿಂದ 7,500 ಪದಗಳ ಮಿತಿಯ ಬರವಣಿಗೆಯಾಗಿರಬೇಕು. ಪ್ರಥಮ ಬಹುಮಾನ ₹ 15 ಸಾವಿರ, ದ್ವಿತೀಯ ಬಹುಮಾನ ₹ 12 ಸಾವಿರ, ತೃತೀಯ ಬಹುಮಾನ ₹ 10 ಸಾವಿರ ಹಾಗೂ ಎರಡು ಸಮಾಧಾನಕರ ಬಹುಮಾನ ತಲಾ ₹ 5 ಸಾವಿರ ಇರಲಿದೆ ಎಂದು ಸಂಘವು ತಿಳಿಸಿದೆ.</p>.<p>ನಾಟಕದ ಪ್ರತಿಯನ್ನು ಇ ಮೇಲ್ ವಿಳಾಸ kalavidarusmg@gmail.com ಅಥವಾ ಕೊಟ್ರಪ್ಪ ಜಿ. ಹಿರೇಮಾಗಡಿ, ಕೊಹಿಮಾ 2ನೇ ಮುಖ್ಯರಸ್ತೆ, 6ನೇ ತಿರವು, ಅಶೋಕ ನಗರ, ಶಿವಮೊಗ್ಗ–577205 ಈ ವಿಳಾಸಕ್ಕೆ ಅ.30ರೊಳಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಸಂಪರ್ಕಕ್ಕೆ.: 9449291919, 9448138183</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋವಿಡ್ನಿಂದಾಗಿ ವಿವಿಧ ವರ್ಗದವರು ಎದುರಿಸಿದ ಸಂಕಷ್ಟಗಳು ಸೇರಿದಂತೆ ರೋಗ ತಂದ ಬದಲಾವಣೆಗಳ ಬಗ್ಗೆ ಶಿವಮೊಗ್ಗದ ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘವು ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆ ಆಯೋಜಿಸಿದೆ.</p>.<p>ಕೋವಿಡ್ ಸಂದರ್ಭದಲ್ಲಿನ ಸಾವು–ನೋವು, ಸಂಘರ್ಷ, ಸಾಮರಸ್ಯ, ಪ್ರೀತಿ–ಪ್ರೇಮ, ಕೌಟುಂಬಿಕ ದೌರ್ಜನ್ಯ, ರಾಜಕೀಯ ಬೆಳವಣಿಗೆ, ಭ್ರಷ್ಟಾಚಾರ, ಕಾರ್ಮಿಕರ ವಲಸೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸ್ವತಂತ್ರ ನಾಟಕವನ್ನು ರಚಿಸಬೇಕು. ರಂಗ ಪ್ರಯೋಗದ ಅವಧಿ 1 ಗಂಟೆ 15 ನಿಮಿಷಗಳಿಂದ 1 ಗಂಟೆ 30 ನಿಮಿಷಗಳ ಕಾಲಮಿತಿ ಹೊಂದುವಂತೆ ಇರಬೇಕು. 6 ಸಾವಿರದಿಂದ 7,500 ಪದಗಳ ಮಿತಿಯ ಬರವಣಿಗೆಯಾಗಿರಬೇಕು. ಪ್ರಥಮ ಬಹುಮಾನ ₹ 15 ಸಾವಿರ, ದ್ವಿತೀಯ ಬಹುಮಾನ ₹ 12 ಸಾವಿರ, ತೃತೀಯ ಬಹುಮಾನ ₹ 10 ಸಾವಿರ ಹಾಗೂ ಎರಡು ಸಮಾಧಾನಕರ ಬಹುಮಾನ ತಲಾ ₹ 5 ಸಾವಿರ ಇರಲಿದೆ ಎಂದು ಸಂಘವು ತಿಳಿಸಿದೆ.</p>.<p>ನಾಟಕದ ಪ್ರತಿಯನ್ನು ಇ ಮೇಲ್ ವಿಳಾಸ kalavidarusmg@gmail.com ಅಥವಾ ಕೊಟ್ರಪ್ಪ ಜಿ. ಹಿರೇಮಾಗಡಿ, ಕೊಹಿಮಾ 2ನೇ ಮುಖ್ಯರಸ್ತೆ, 6ನೇ ತಿರವು, ಅಶೋಕ ನಗರ, ಶಿವಮೊಗ್ಗ–577205 ಈ ವಿಳಾಸಕ್ಕೆ ಅ.30ರೊಳಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಸಂಪರ್ಕಕ್ಕೆ.: 9449291919, 9448138183</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>